ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಂಗಕರ್ಮಿ ಪ್ರಕಾಶ್ ಬೆಳವಾಡಿ, ‘ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚೆನ್ನಣ್ಣನವರ್ (ಶಾಂತಿ ರಕ್ಷಣೆ ಹಾಗೂ ಸಂಘರ್ಷ ಪರಿಹಾರ), ಡಾ.ಪದ್ಮಿನಿ ಪ್ರಸಾದ್ (ರೋಗ ನಿಯಂತ್ರಣ ಮತ್ತು ಚಿಕಿತ್ಸೆ), ವಿಶ್ವನಾಥ್ ಶ್ರೀಕಂಠಯ್ಯ (ನೀರು ಮತ್ತು ನೈರ್ಮಲ್ಯ), ಆಶಾ ವಿಜಯ್ (ತಾಯಿ ಮತ್ತು ಶಿಶು ಆರೈಕೆ), ಜಿ.ಎನ್.ನರಸಿಂಹಮೂರ್ತಿ (ಮೂಲಶಿಕ್ಷಣ ಮತ್ತು ಸಾಕ್ಷರತೆ), ಎಲ್.ಎಚ್.ಮಂಜುನಾಥ್ (ಆರ್ಥಿಕ ಮತ್ತು ಸಮುದಾಯ ಅಭಿವೃದ್ಧಿ) ಈ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ’ ಎಂದು ಹೇಳಿದರು.