'ಸೇವೆಯನ್ನು ಥೆರೆಸಾ ಅವರು ಅಂದು ಸಣ್ಣ ಬೀಜವಾಗಿ ಬಿತ್ತಿದರು. ಇಂದು ಅವರನ್ನು ಅನುಸರಿಸುತ್ತಿರುವ ಸಹಸ್ರಾರು ಮಂದಿಯಿಂದ ಸೇವೆ ಹೆಮ್ಮರವಾಗಿ ಬೆಳೆದಿದೆ. ಸಮಾಜದ ಒಳಿತಿಗಾಗಿ ಅವರ ಸೇವೆ ಶ್ಲಾಘನೀಯ. ಮಕ್ಕಳು, ಬಡವರು, ಕುಷ್ಠ ರೋಗಿಗಳ ಆರೈಕೆಯನ್ನೇ ತಮ್ಮ ಆದ್ಯತೆಯನ್ನಾಗಿ ಮಾಡಿಕೊಂಡವರು. ಅವರ ಹಾದಿಯಲ್ಲಿ ಸೇವಾ ಕಾರ್ಯಗಳನ್ನು ನಾವೆಲ್ಲಾ ಮುಂದುವರಿಸಬೇಕು' ಎಂದರು.
'ಸಂಸ್ಥೆಯ ವತಿಯಿಂದ ವೃದ್ಧಾಶ್ರಮ, ಕುಷ್ಠರೋಗಿಗಳು, ಅನಾಥಾಶ್ರಮಗಳಿಗೆ ದಿನಸಿ, ಬೆಡ್ಶೀಟ್, ವೈಯಕ್ತಿಕ ಬಳಕೆ ವಸ್ತುಗಳು ಸೇರಿ ₹5 ಲಕ್ಷ ಮೌಲ್ಯದ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಕೊರೊನಾ ಕಾರಣಕ್ಕೆ ಸಂಸ್ಥೆಯ 50 ಕ್ಲಬ್ಗಳಿಂದ ಕಡಿಮೆ ಸಂಖ್ಯೆಯಲ್ಲಿ ಪದಾಧಿಕಾರಿಗಳು ಭಾಗವಹಿಸಿದ್ದಾರೆ' ಎಂದು ವಿವರಿಸಿದರು.