ಅಲ್ಲೇ ಇದ್ದ ವೈದ್ಯರ ಸಹೋದರ ನೆರವಿಗೆ ಬಂದಾಗ ಚೂರಿಯಿಂದ ಪ್ರದೀಪ್ ಹಲ್ಲೆಗೆ ಯತ್ನಿಸಿದ್ದ. ಅದನ್ನು ಕಂಡ ಶೆಟ್ಟಿ, ಸಹೋದರರ ಜೊತೆ ಅಲ್ಲಿಂದ ತಪ್ಪಿಸಿಕೊಂಡಿದ್ದರು. ನಾಯಿಗೆ ಚಿಕಿತ್ಸೆ ನೀಡದಿದ್ದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದ. ಪೊಲೀಸರಿಗೆ ಕರೆ ಮಾಡಲು ಮುಂದಾದಾಗ ಪ್ರದೀಪ್ ಪರಾರಿಯಾಗಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.