<p><strong>ರಾಜರಾಜೇಶ್ವರಿನಗರ: ‘</strong>ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವೇ ಶ್ರೇಷ್ಠವಾಗಿದ್ದು, ಅದನ್ನು ಮತ್ತಷ್ಟು ಗಟ್ಟಿಗೊಳಿಸುವ ಕೆಲಸವನ್ನು ಯುವ ವಕೀಲರು ಮಾಡಬೇಕು’ ಎಂದುಹೈಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹೇಳಿದರು.</p>.<p>ಕೆ.ಎಲ್.ಇ. ಕಾನೂನು ಕಾಲೇಜು ಮತ್ತು ಸುರಾನಾ ಕಾನೂನು ಕಾಲೇಜು ಹಮ್ಮಿಕೊಂಡಿದ್ದ ‘ಅಣುಕು ನ್ಯಾಯಾಲಯದ ರಾಷ್ಟ್ರೀಯ ಸ್ಪರ್ಧಾ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಎಂತಹ ಸಂದರ್ಭ ಬಂದರೂ ಕಾನೂನು ಪರಿಪಾಲನೆ ಮಾಡಬೇಕು. ಸಾರ್ವಜನಿಕ ಜೀವನದಲ್ಲಿ ಗೌರವ ಹೆಚ್ಚಿಸಿಕೊಳ್ಳಬೇಕು. ಬುದ್ಧಿವಂತಿಕೆ, ಕೌಶಲ, ಛಲ, ಸೌಜನ್ಯ, ವಿನಯವಂತಿಕೆ ಸಂಪಾದಿಸಬೇಕು. ನೊಂದವರಿಗೆ ಸಹಕಾರ ಹಸ್ತ ಚಾಚಬೇಕು. ಹಣಗಳಿಕೆಗೊಸ್ಕರ ನ್ಯಾಯದ ದಾರಿ ಬಿಡಬಾರದು’ ಎಂದು ಕಿವಿಮಾತು ಹೇಳಿದರು.</p>.<p>‘ಕಾಣದ ಕೈಗಳಿಂದ ನರಳುತ್ತಿರುವಬಡವರು, ನೊಂದವರು ನ್ಯಾಯಕ್ಕಾಗಿ ಇಂದು ಬರುತ್ತಿದ್ದಾರೆ. ಅವರಿಗೆ ಕಾನೂನಿನ ರಕ್ಷಣೆ ನೀಡಿದರೆ ವೃತ್ತಿ ಬದುಕು ಸಾರ್ಥಕವಾಗುತ್ತದೆ’ ಎಂದು ಕಿವಿಮಾತು ಹೇಳಿದರು.</p>.<p>ರಾಷ್ಟ್ರೀಯ ಕಾನೂನು ಕಾಲೇಜಿನ ಕುಲಪತಿ ಆರ್.ವೆಂಕಟರಾವ್, ‘ಎಲ್ಲ ವಕೀಲರು ಅಧ್ಯಯನದ ಕಡೆ ಗಮನ ಹರಿಸಬೇಕು. ಕಕ್ಷಿದಾರನಿಗೆ ನೋವಾಗದಂತೆ ನ್ಯಾಯ ದೊರಕಿಸಿಕೊಡಬೇಕು’ ಎಂದರು.</p>.<p>ದೇಶದ ವಿವಿಧ ನಗರಗಳಲ್ಲಿನ ಕಾನೂನು ಕಾಲೇಜುಗಳಿಂದ ಬಂದಿದ್ದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜರಾಜೇಶ್ವರಿನಗರ: ‘</strong>ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವೇ ಶ್ರೇಷ್ಠವಾಗಿದ್ದು, ಅದನ್ನು ಮತ್ತಷ್ಟು ಗಟ್ಟಿಗೊಳಿಸುವ ಕೆಲಸವನ್ನು ಯುವ ವಕೀಲರು ಮಾಡಬೇಕು’ ಎಂದುಹೈಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹೇಳಿದರು.</p>.<p>ಕೆ.ಎಲ್.ಇ. ಕಾನೂನು ಕಾಲೇಜು ಮತ್ತು ಸುರಾನಾ ಕಾನೂನು ಕಾಲೇಜು ಹಮ್ಮಿಕೊಂಡಿದ್ದ ‘ಅಣುಕು ನ್ಯಾಯಾಲಯದ ರಾಷ್ಟ್ರೀಯ ಸ್ಪರ್ಧಾ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಎಂತಹ ಸಂದರ್ಭ ಬಂದರೂ ಕಾನೂನು ಪರಿಪಾಲನೆ ಮಾಡಬೇಕು. ಸಾರ್ವಜನಿಕ ಜೀವನದಲ್ಲಿ ಗೌರವ ಹೆಚ್ಚಿಸಿಕೊಳ್ಳಬೇಕು. ಬುದ್ಧಿವಂತಿಕೆ, ಕೌಶಲ, ಛಲ, ಸೌಜನ್ಯ, ವಿನಯವಂತಿಕೆ ಸಂಪಾದಿಸಬೇಕು. ನೊಂದವರಿಗೆ ಸಹಕಾರ ಹಸ್ತ ಚಾಚಬೇಕು. ಹಣಗಳಿಕೆಗೊಸ್ಕರ ನ್ಯಾಯದ ದಾರಿ ಬಿಡಬಾರದು’ ಎಂದು ಕಿವಿಮಾತು ಹೇಳಿದರು.</p>.<p>‘ಕಾಣದ ಕೈಗಳಿಂದ ನರಳುತ್ತಿರುವಬಡವರು, ನೊಂದವರು ನ್ಯಾಯಕ್ಕಾಗಿ ಇಂದು ಬರುತ್ತಿದ್ದಾರೆ. ಅವರಿಗೆ ಕಾನೂನಿನ ರಕ್ಷಣೆ ನೀಡಿದರೆ ವೃತ್ತಿ ಬದುಕು ಸಾರ್ಥಕವಾಗುತ್ತದೆ’ ಎಂದು ಕಿವಿಮಾತು ಹೇಳಿದರು.</p>.<p>ರಾಷ್ಟ್ರೀಯ ಕಾನೂನು ಕಾಲೇಜಿನ ಕುಲಪತಿ ಆರ್.ವೆಂಕಟರಾವ್, ‘ಎಲ್ಲ ವಕೀಲರು ಅಧ್ಯಯನದ ಕಡೆ ಗಮನ ಹರಿಸಬೇಕು. ಕಕ್ಷಿದಾರನಿಗೆ ನೋವಾಗದಂತೆ ನ್ಯಾಯ ದೊರಕಿಸಿಕೊಡಬೇಕು’ ಎಂದರು.</p>.<p>ದೇಶದ ವಿವಿಧ ನಗರಗಳಲ್ಲಿನ ಕಾನೂನು ಕಾಲೇಜುಗಳಿಂದ ಬಂದಿದ್ದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>