‘2016 ಹಾಗೂ 2017ರ ಬೆಳಗಾವಿ ಅಧಿವೇಶನದ ವೇಳೆ ಕೆ.ಬಿ.ಕೋಳಿವಾಡ ವಿಧಾನಸಭಾಧ್ಯಕ್ಷರಾಗಿದ್ದರು. ಅವರ ಸೂಚನೆ, ಅನುಮೋದನೆ ಹಾಗೂ ಮಾರ್ಗದರ್ಶನದಂತೆ ಮೂರ್ತಿ ನಡೆದುಕೊಂಡಿದ್ದಾರೆ. ಕಾರ್ಯದರ್ಶಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿಲ್ಲ. ಈ ಖರ್ಚು ವೆಚ್ಚಗಳ ದಾಖಲೆಗಳನ್ನು ಸಿಎಜಿ ಲೆಕ್ಕಪರಿಶೋಧನೆ ನಡೆಸಿದ್ದಾರೆ. ಯಾವುದೇ ಗಂಭೀರ ಷರಾಗಳನ್ನು ವರದಿಯಲ್ಲಿ ಬರೆದಿಲ್ಲ. ಹೀಗಿದ್ದರೂ, ಈಗಿನ ಸಭಾಧ್ಯಕ್ಷರಾದ ಕೆ.ಆರ್.ರಮೇಶ್ ಕುಮಾರ್ ದುರುದ್ದೇಶದಿಂದ, ತಮ್ಮದೇ ಸಮುದಾಯಕ್ಕೆ ಸೇರಿದ ಎಂ.ಕೆ.ವಿಶಾಲಾಕ್ಷಿ ಅವರನ್ನು ಕಾರ್ಯದರ್ಶಿ ಹುದ್ದೆಗೆ ತರಬೇಕು ಎಂಬ ಉದ್ದೇಶದಿಂದ ಅಮಾನತು ಮಾಡಿದ್ದಾರೆ. ಇದು ಜಾತಿವಾದದ ಕ್ರೌರ್ಯ’ ಎಂದು ದೂರಿದೆ.