ಪ್ರತಿಷ್ಠಾನದ ಸ್ವಯಂಸೇವಕರು, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು, 'ಮರಗಳನ್ನು ಉಳಿಸಿ, ಭೂಮಿ ಉಳಿಸಿ', ‘ಸೈಕಲ್ ಬಳಸಿ ಹಸಿರು ಉಳಿಸಿ’, 'ಪ್ಲಾಸ್ಟಿಕ್ ಬಳಕೆ ತಪ್ಪಿಸಿ’ ‘ಕೆರೆಗಳನ್ನು ಉಳಿಸಿ' ಮುಂತಾದ ಸಂದೇಶವನ್ನು ಹೊಂದಿದ್ದ ಫಲಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿದರು. ಸಂಚಾರದ ಸಿಗ್ನಲ್ಗಳಲ್ಲಿ ‘ಸಿಗ್ನಲ್ಗಳಲ್ಲಿ ವಾಹನದ ಎಂಜಿನ್ ಆಫ್ ಮಾಡಿ ಇಂಧನ ಉಳಿಸಿ’ ಎಂಬ ಸಂದೇಶ ಸಾರಿದರು.