ಮಣ್ಣಿನ ಅವನತಿಯನ್ನು ತಡೆದು ಅದರ ಪುನರುಜ್ಜೀವನಕೈಗೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಈ ಅಭಿಯಾನವು ಎಲ್ಲ ದೇಶಗಳ ಜನತೆಯಲ್ಲಿ ಅರಿವು ಮೂಡಿಸಿ, ಸರ್ಕಾರಗಳು ಭೂಸ್ನೇಹಿ ಕಾರ್ಯನೀತಿಗಳನ್ನು ರೂಪಿಸಿ ತಮ್ಮ ದೇಶದ ಮಣ್ಣಿನ ರಕ್ಷಣೆ ಮಾಡುವಂತೆ ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ. ತಮ್ಮ ಪ್ರವಾಸದುದ್ದಕ್ಕೂ ಸದ್ಗುರು ಅವರು ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಿ, ರಾಜಕೀಯ ನಾಯಕರು, ವಿಜ್ಞಾನಿಗಳು, ಮಾಧ್ಯಮ ಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಚುನಾಯಿತ ನಾಯಕರ ಜೊತೆ ಮಾತುಕತೆನಡೆಸುತ್ತಿದ್ದಾರೆ.