<p>ಪ್ರಜಾವಾಣಿ ವಾರ್ತೆ</p>.<p>ಬೆಂಗಳೂರು: ರೆಸಿಡೆನ್ಸಿ ರಸ್ತೆಯ ಸುತ್ತಮುತ್ತ ಬೆಳಿಗ್ಗೆ 8.30ರ ಬಳಿಕ ಶಾಲಾ ಬಸ್ಗಳನ್ನು ರಸ್ತೆಬದಿಯಲ್ಲಿ ನಿಲುಗಡೆ ಮಾಡದಂತೆ ಸಂಚಾರ ಪೊಲೀಸರು ನಿರ್ಬಂಧಿಸಿದ್ದಾರೆ.</p>.<p>ಈ ಮಾರ್ಗದಲ್ಲಿ ಬಿಷಪ್ ಕಾಟನ್ ಬಾಲಕರ– ಬಾಲಕಿಯರ ಶಾಲೆ, ಸೇಕ್ರೆಡ್ ಹಾರ್ಟ್ ಶಾಲೆಯ ಬಳಿ ವಿದ್ಯಾರ್ಥಿ<br />ಗಳನ್ನು ಬಿಡಲು ಬರುವ ಶಾಲಾ ಬಸ್ಗಳು ಸಂಜೆವರೆಗೂ ರಸ್ತೆಯ ಬದಿಯಲ್ಲೇ ನಿಲ್ಲುತ್ತಿವೆ. ಇದರಿಂದ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.</p>.<p>ಈಗ ಪೋಷಕರ ವಾಹನಗಳನ್ನು ಶಾಲಾ ಆವರಣಕ್ಕೆ ಬಿಡಲು ಶಾಲಾ ಆಡಳಿತ ಮಂಡಳಿ ಒಪ್ಪಿದ್ದು ಮೈದಾನಕ್ಕೆ ವಾಹನಗಳು ಪ್ರವೇಶಿಸುತ್ತಿವೆ.<br />ಅದರ ಜತೆಗೆ ಶಾಲಾ ಬಸ್ಗಳು ರಸ್ತೆಬದಿಯಲ್ಲಿ ನಿಲುಗಡೆ ಮಾಡದಂತೆ ಪೊಲೀಸರು ಸೂಚಿಸಿದ್ದಾರೆ.</p>.<p>‘ರೆಸಿಡೆನ್ಸ್ ರಸ್ತೆಯಲ್ಲಿ ಸಮಸ್ಯೆ ತೀವ್ರವಾಗಿತ್ತು. ಶಾಲಾ ಬಸ್ಗಳು ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡುತ್ತಿದ್ದರಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಆಗಿತ್ತು. ಅಲ್ಲಿ<br />ನಿರ್ಬಂಧ ಹೇರಲಾಗಿದೆ. ಮುಂದೆ ನಗರದಾದ್ಯಂತ ಈ ಕ್ರಮ ಜಾರಿಗೆ ತರಲಾಗುವುದು’ ಎಂದು ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ.ಎ.ಸಲೀಂ ತಿಳಿಸಿದ್ದಾರೆ.</p>.<p>ನಗರದ ಕೆಲವು ಶಾಲೆಗಳು<br />ರಸ್ತೆಬದಿಯಲ್ಲಿದ್ದು ಶಾಲಾ ಮಕ್ಕಳನ್ನು ಬಿಡುವಾಗ ಹಾಗೂ ಬಸ್ಗೆ ಹತ್ತಿಸಿಕೊಳ್ಳುವಾಗ ವಾಹನ ದಟ್ಟಣೆಯಾಗುತ್ತಿದೆ. ಅಂತಹ ಶಾಲೆ ಗುರುತಿಸಿ, ಪೋಷಕರ ವಾಹನಕ್ಕೆ ಆಗಮನ ಹಾಗೂ<br />ನಿರ್ಗಮನ ದ್ವಾರ ನಿರ್ಮಿಸುವಂತೆ ಸೂಚನೆ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p>ಬೆಂಗಳೂರು: ರೆಸಿಡೆನ್ಸಿ ರಸ್ತೆಯ ಸುತ್ತಮುತ್ತ ಬೆಳಿಗ್ಗೆ 8.30ರ ಬಳಿಕ ಶಾಲಾ ಬಸ್ಗಳನ್ನು ರಸ್ತೆಬದಿಯಲ್ಲಿ ನಿಲುಗಡೆ ಮಾಡದಂತೆ ಸಂಚಾರ ಪೊಲೀಸರು ನಿರ್ಬಂಧಿಸಿದ್ದಾರೆ.</p>.<p>ಈ ಮಾರ್ಗದಲ್ಲಿ ಬಿಷಪ್ ಕಾಟನ್ ಬಾಲಕರ– ಬಾಲಕಿಯರ ಶಾಲೆ, ಸೇಕ್ರೆಡ್ ಹಾರ್ಟ್ ಶಾಲೆಯ ಬಳಿ ವಿದ್ಯಾರ್ಥಿ<br />ಗಳನ್ನು ಬಿಡಲು ಬರುವ ಶಾಲಾ ಬಸ್ಗಳು ಸಂಜೆವರೆಗೂ ರಸ್ತೆಯ ಬದಿಯಲ್ಲೇ ನಿಲ್ಲುತ್ತಿವೆ. ಇದರಿಂದ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.</p>.<p>ಈಗ ಪೋಷಕರ ವಾಹನಗಳನ್ನು ಶಾಲಾ ಆವರಣಕ್ಕೆ ಬಿಡಲು ಶಾಲಾ ಆಡಳಿತ ಮಂಡಳಿ ಒಪ್ಪಿದ್ದು ಮೈದಾನಕ್ಕೆ ವಾಹನಗಳು ಪ್ರವೇಶಿಸುತ್ತಿವೆ.<br />ಅದರ ಜತೆಗೆ ಶಾಲಾ ಬಸ್ಗಳು ರಸ್ತೆಬದಿಯಲ್ಲಿ ನಿಲುಗಡೆ ಮಾಡದಂತೆ ಪೊಲೀಸರು ಸೂಚಿಸಿದ್ದಾರೆ.</p>.<p>‘ರೆಸಿಡೆನ್ಸ್ ರಸ್ತೆಯಲ್ಲಿ ಸಮಸ್ಯೆ ತೀವ್ರವಾಗಿತ್ತು. ಶಾಲಾ ಬಸ್ಗಳು ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡುತ್ತಿದ್ದರಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಆಗಿತ್ತು. ಅಲ್ಲಿ<br />ನಿರ್ಬಂಧ ಹೇರಲಾಗಿದೆ. ಮುಂದೆ ನಗರದಾದ್ಯಂತ ಈ ಕ್ರಮ ಜಾರಿಗೆ ತರಲಾಗುವುದು’ ಎಂದು ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ.ಎ.ಸಲೀಂ ತಿಳಿಸಿದ್ದಾರೆ.</p>.<p>ನಗರದ ಕೆಲವು ಶಾಲೆಗಳು<br />ರಸ್ತೆಬದಿಯಲ್ಲಿದ್ದು ಶಾಲಾ ಮಕ್ಕಳನ್ನು ಬಿಡುವಾಗ ಹಾಗೂ ಬಸ್ಗೆ ಹತ್ತಿಸಿಕೊಳ್ಳುವಾಗ ವಾಹನ ದಟ್ಟಣೆಯಾಗುತ್ತಿದೆ. ಅಂತಹ ಶಾಲೆ ಗುರುತಿಸಿ, ಪೋಷಕರ ವಾಹನಕ್ಕೆ ಆಗಮನ ಹಾಗೂ<br />ನಿರ್ಗಮನ ದ್ವಾರ ನಿರ್ಮಿಸುವಂತೆ ಸೂಚನೆ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>