‘ಸಾಮಾನ್ಯವಾಗಿ ಮನೆಗಳಲ್ಲಿ ಮಕ್ಕಳು ಕುತೂಹಲದಿಂದ ಕೇಳುವ ಪ್ರಶ್ನೆಗಳಿಗೆ ಹಿರಿಯರ ಬಳಿ ಉತ್ತರ ಇರುವುದಿಲ್ಲ. ಆಗ ತಮ್ಮ ನ್ಯೂನತೆ ಮುಚ್ಚಿಕೊಳ್ಳಲು ತಲೆಹರಟೆ ಎಂದು ಗದರಿಸಿ, ಬಾಯಿ ಮುಚ್ಚಿಸುತ್ತಾರೆ. ಅಷ್ಟಕ್ಕೇ ಪ್ರಶ್ನಿಸುವ ಕುತೂಹಲ ನಿಲ್ಲಬಾರದು. ಆ ಗುಣವೇ ನಿಮ್ಮನ್ನು ಭವಿಷ್ಯದ ಸಾಧಕರನ್ನಾಗಿ ಮಾಡುತ್ತದೆ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.