‘ಅಪಹರಣ ಹಾಗೂ ಹತ್ಯೆ ಸಂಬಂಧ ದಾಖಲಾದ ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳಾದ ಎಚ್.ಜಿ. ವೆಂಕಟಾಚಲಪತಿ, ಅವರ ಪುತ್ರ ಎ.ವಿ.ಶರತ್ ಕುಮಾರ್, ಸಹಚರರಾದ ಆರ್.ಶ್ರೀಧರ್, ಕೆ. ಧನುಷ್, ಯಲಹಂಕದ ಎಂ.ಪಿ.ಮಂಜುನಾಥ್, ಉದಯ, ನವೀನ್, ಸಂಕೇತ್, ಭೋಗೇಶ್, ಗೋವಿಂದ್ ಅವರನ್ನು ಬಂಧಿಸಲಾಗಿತ್ತು. ಶರತ್ ಅವರನ್ನು ಕೊಂದಿರುವುದಾಗಿ ಹೇಳಿದ್ದ ಆರೋಪಿಗಳು, ಚಾರ್ಮಾಡಿ ಘಾಟಿಯಲ್ಲಿ ಮೃತದೇಹ ಬಿಸಾಕಿರುವುದಾಗಿ ಮಾಹಿತಿ ನೀಡಿದ್ದರು.’