ಬಿಜೆಪಿ ರಾಜ್ಯ ಘಟಕದ ಕಚೇರಿಯಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಸತ್ತಿನ ಹೊಸ ಕಟ್ಟಡವು ಭಾರತದ ಹೆಮ್ಮೆಯ ಪ್ರತೀಕ. ಅಲ್ಲಿ ರಾಜದಂಡದ (ಸೆಂಗೋಲ್) ಪ್ರತಿಷ್ಠಾಪನೆ ಆಗಿದೆ. ಆ ಮೂಲಕ ಪ್ರಧಾನಿಯವರು ನಮ್ಮ ನಾಗರಿಕತೆಯ ಕುರಿತು ಜಾಗೃತಿ ಮೂಡಿಸುವ ಮಹತ್ವದ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.