‘ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಬಿಪಿಒ ಕಂಪನಿಯೊಂದರಲ್ಲಿ ಸದ್ಯ ನಾನು ಕೆಲಸ ಮಾಡುತ್ತಿದ್ದೇನೆ. ಬನ್ನೇರುಘಟ್ಟದಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಸಾಫ್ಟ್ವೇರ್ ಕಂಪನಿಯಲ್ಲಿ ಪರಿಚಿತನಾಗಿದ್ದ ಗೌತಮ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಇದೇ 6ರಂದು ಬೆಳಿಗ್ಗೆ 12 ಗಂಟೆಗೆ ನನಗೆ ಕರೆ ಮಾಡಿದ್ದ ಗೌತಮ್, ತುರ್ತಾಗಿ ಏನೋ ವಿಷಯ ಮಾತನಾಡಬೇಕೆಂದು ಕರೆದಿದ್ದ. ಆದರೆ, ಆತ ನನ್ನನ್ನು ಕಾರಿನಲ್ಲಿ ಅವನ ಮನೆಗೆ ಅಪಹರಿಸಿಕೊಂಡು ಹೋಗಿ, ವಿವಾಹವಾಗುವಂತೆ ಒತ್ತಾಯಿಸಿ ಥಳಿಸಿದ್ದ. ಮದುವೆಗೆ ಒಪ್ಪದಿದ್ದರೆ ಸುಪಾರಿ ಕೊಟ್ಟು ಕೊಲೆ ಮಾಡಿಸುವುದಾಗಿ ಬೆದರಿಸಿದ’ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.