ಬೆಂಗಳೂರು: ವಚನಜ್ಯೋತಿ ಬಳಗವು ನೀಡುವ ‘ಶಿವಲಿಂಗ ಪ್ರಶಸ್ತಿ’ಗೆಅಂಬಯ್ಯ ನುಲಿ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯು ₹ 10 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಸೋಮವಾರ (ಫೆ.22) ಸಂಜೆ 5 ಗಂಟೆಗೆ ಸಂಸ ರಂಗ ಬಯಲು ಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.