<p><strong>ಬೆಂಗಳೂರು:</strong> ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕೃಷ್ಣ ಜಯಂತಿ ಕಾರ್ಯಕ್ರಮ ಗೊಂದಲದ ಗೂಡಾಗಿತ್ತು.</p>.<p>ಆಹ್ವಾನಿತರ ಪಟ್ಟಿಯಲ್ಲಿದ್ದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಕೇಂದ್ರ ಸಚಿವ ಅನಂತಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಗೈರುಹಾಜರಾಗಿದ್ದರು. ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್ ಕಾರ್ಯಕ್ರಮ ಉದ್ಘಾಟಿಸಿದರು.</p>.<p>ಮಾತಿನ ಆರಂಭದಲ್ಲಿಯೇ ಅವರು, ‘ವೇದಿಕೆ ಮೇಲೆ ಇರುವ ಶಾಸಕ ಉದಯ್ ಗರುಡಾಚಾರ್ ಅವರೇ’ ಎಂದರು. ಈ ಮಾತು ಕೇಳಿ ಯಾದವ ಸಮುದಾಯದವರು, ‘ಅವರು ಎಲ್ಲಿ ಬಂದಿದ್ದಾರೆ ಸರಿಯಾಗಿ ನೋಡಿ’ ಎಂದು ಗಲಾಟೆ ಆರಂಭಿಸಿದರು.</p>.<p>ಜನರ ಕಡೆ ಸುಮ್ಮನಿರಿ ಎಂದು ಕೈತೋರಿಸುತ್ತಾ ಮಾತು ಮುಂದುವರಿಸಿದ ಜಯಮ್ಮ, ‘ಹಿಂದಿನ ವರ್ಷ ಅತ್ಯುತ್ತಮವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯಾದವ ಸಮುದಾಯದ ಏಕೈಕ ವಿಧಾನಪರಿಷತ್ ಸದಸ್ಯೆಯಾದ ನನ್ನನ್ನೂ ಈ ವರ್ಷ ಕರೆದಿರಲಿಲ್ಲ. ಆದರೂ ನಾನು ಬಂದಿದ್ದೇನೆ’ ಎಂದರು.</p>.<p>ಆಗ ಸಭಿಕರು, ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಶೇಮ್, ಶೇಮ್. ಗಣ್ಯರು ಯಾರೂ ಬಂದಿಲ್ಲ. ನೀವು ಯಾಕೆ ಬಂದಿದ್ದೀರಿ’ ಎಂದು ಕೂಗಾಡಿದರು. ಇದಕ್ಕೆ ಜಯಮ್ಮ ಅವರು, ‘ದಯಮಾಡಿ ಎಲ್ಲರೂ ಕುಳಿತುಕೊಳ್ಳಿ. ನಾವು ಒಂದಾಗಿದ್ದರೆ ಮುಖಂಡರು ಕಾರ್ಯಕ್ರಮಕ್ಕೆ ಬರುತ್ತಿದ್ದರು’ ಎಂದರು.</p>.<p>‘ಕೃಷ್ಣ ಯಾದವ ಸಮುದಾಯಕ್ಕೆ ಮಾತ್ರ ಸೀಮಿತನಾದವನಲ್ಲ. ವಿಶ್ವವೇ ಅವನನ್ನು ಪ್ರೀತಿಸುತ್ತದೆ. ಗೊಲ್ಲ ಸಮುದಾಯದವರು ಕಲೆ ಹಾಗೂ ಸಂಸ್ಕೃತಿಯಲ್ಲಿ ಮುಂದೆ ಇದ್ದಾರೆ. ರಾಜಕೀಯವಾಗಿಯೂ ಅವರು ಮುಂದೆ ಬರಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕೃಷ್ಣ ಜಯಂತಿ ಕಾರ್ಯಕ್ರಮ ಗೊಂದಲದ ಗೂಡಾಗಿತ್ತು.</p>.<p>ಆಹ್ವಾನಿತರ ಪಟ್ಟಿಯಲ್ಲಿದ್ದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಕೇಂದ್ರ ಸಚಿವ ಅನಂತಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಗೈರುಹಾಜರಾಗಿದ್ದರು. ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್ ಕಾರ್ಯಕ್ರಮ ಉದ್ಘಾಟಿಸಿದರು.</p>.<p>ಮಾತಿನ ಆರಂಭದಲ್ಲಿಯೇ ಅವರು, ‘ವೇದಿಕೆ ಮೇಲೆ ಇರುವ ಶಾಸಕ ಉದಯ್ ಗರುಡಾಚಾರ್ ಅವರೇ’ ಎಂದರು. ಈ ಮಾತು ಕೇಳಿ ಯಾದವ ಸಮುದಾಯದವರು, ‘ಅವರು ಎಲ್ಲಿ ಬಂದಿದ್ದಾರೆ ಸರಿಯಾಗಿ ನೋಡಿ’ ಎಂದು ಗಲಾಟೆ ಆರಂಭಿಸಿದರು.</p>.<p>ಜನರ ಕಡೆ ಸುಮ್ಮನಿರಿ ಎಂದು ಕೈತೋರಿಸುತ್ತಾ ಮಾತು ಮುಂದುವರಿಸಿದ ಜಯಮ್ಮ, ‘ಹಿಂದಿನ ವರ್ಷ ಅತ್ಯುತ್ತಮವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯಾದವ ಸಮುದಾಯದ ಏಕೈಕ ವಿಧಾನಪರಿಷತ್ ಸದಸ್ಯೆಯಾದ ನನ್ನನ್ನೂ ಈ ವರ್ಷ ಕರೆದಿರಲಿಲ್ಲ. ಆದರೂ ನಾನು ಬಂದಿದ್ದೇನೆ’ ಎಂದರು.</p>.<p>ಆಗ ಸಭಿಕರು, ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಶೇಮ್, ಶೇಮ್. ಗಣ್ಯರು ಯಾರೂ ಬಂದಿಲ್ಲ. ನೀವು ಯಾಕೆ ಬಂದಿದ್ದೀರಿ’ ಎಂದು ಕೂಗಾಡಿದರು. ಇದಕ್ಕೆ ಜಯಮ್ಮ ಅವರು, ‘ದಯಮಾಡಿ ಎಲ್ಲರೂ ಕುಳಿತುಕೊಳ್ಳಿ. ನಾವು ಒಂದಾಗಿದ್ದರೆ ಮುಖಂಡರು ಕಾರ್ಯಕ್ರಮಕ್ಕೆ ಬರುತ್ತಿದ್ದರು’ ಎಂದರು.</p>.<p>‘ಕೃಷ್ಣ ಯಾದವ ಸಮುದಾಯಕ್ಕೆ ಮಾತ್ರ ಸೀಮಿತನಾದವನಲ್ಲ. ವಿಶ್ವವೇ ಅವನನ್ನು ಪ್ರೀತಿಸುತ್ತದೆ. ಗೊಲ್ಲ ಸಮುದಾಯದವರು ಕಲೆ ಹಾಗೂ ಸಂಸ್ಕೃತಿಯಲ್ಲಿ ಮುಂದೆ ಇದ್ದಾರೆ. ರಾಜಕೀಯವಾಗಿಯೂ ಅವರು ಮುಂದೆ ಬರಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>