ಬೆಂಗಳೂರು: ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಪುಣ್ಯಸ್ಮರಣೆಯ ನಿಮಿತ್ತ ಕಂದಾಯ ಸಚಿವ ಆರ್. ಅಶೋಕ ಅವರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವಿವಿಧ ವಾರ್ಡ್ಗಳಲ್ಲಿ ಸಸಿ ನೆಟ್ಟರು.
ಕ್ಷೇತ್ರದ ಹೊಸಕೆರೆಹಳ್ಳಿ ವಾರ್ಡ್, ಗೌಡನಪಾಳ್ಯ, ಕುಮಾರಸ್ವಾಮಿ ಬಡಾವಣೆ, ಕರಿಸಂದ್ರ ವಾರ್ಡ್ ಹಾಗೂ ದೇವಗಿರಿಯಲ್ಲಿ ವಿವಿಧ ವರ್ಗದ ಜನರಿಗೆ ದಿನಸಿ ಕಿಟ್ ವಿತರಣೆ ಮಾಡಿದರು.
‘ಮುಖರ್ಜಿಯವರು ತಮ್ಮ ಬದುಕಿನುದ್ದಕ್ಕೂ ಪ್ರಖರ ರಾಷ್ಟ್ರೀಯತೆಯನ್ನೇ ಪ್ರತಿಪಾದಿಸಿದ್ದರು. ದೇಶ ವಿಭಜನೆಯ ವೇಳೆ ಅದನ್ನ ಪ್ರಬಲವಾಗಿ ವಿರೋಧಿಸಿದ್ದರು. ಅಖಂಡ ಭಾರತದ ಪರಿಕಲ್ಪನೆಯ ಕನಸು ಉಳ್ಳವರಾಗಿದ್ದರು’ ಎಂದು ಅಶೋಕ್ ಸ್ಮರಿಸಿದರು.
ಯಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಟ್ಯಾಬ್ ವಿತರಿಸಲಾಯಿತು.