‘ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ, ಸ್ಮಾರ್ಟ್ ಸಿಟಿ ಮಿಷನ್ ಜೂ.30ರವರೆಗೆ ‘ಅಮೃತ ಉತ್ಸವ’ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಮಹಿಳೆಯರು ಮತ್ತು ಮಕ್ಕಳ ಸಬಲೀಕರಣ ಈ ಉತ್ಸವದ ಉದ್ದೇಶ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿಯ ಯೋಜನೆಗಳನ್ನು ಬಿಬಿಎಂಪಿಯ ವಿಜಯನಗರ, ಶ್ರೀರಾಮಪುರ, ಮತ್ತಿಕೆರೆ ಬಾಲಕಿಯರ ಶಾಲೆಯ 250 ವಿದ್ಯಾರ್ಥಿಗಳಿಗೆ ‘ಸ್ಮಾರ್ಟ್ ಟೂರ್’ನಲ್ಲಿ ಪರಿಚಯಿಸಲಾಯಿತು’ ಎಂದು ಸ್ಮಾರ್ಟ್ ಸಿಟಿ ಯೋಜನೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ ತಿಳಿಸಿದರು.