ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರ | ಸೌಮ್ಯಾ ಹೆಸರು ಶಿಫಾರಸು; ರಾಮಲಿಂಗಾ ರೆಡ್ಡಿ

Published 26 ಜನವರಿ 2024, 22:16 IST
Last Updated 26 ಜನವರಿ 2024, 22:16 IST
ಅಕ್ಷರ ಗಾತ್ರ

ರಾಮನಗರ: ‘ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ರಿ ಸೌಮ್ಯಾರೆಡ್ಡಿ ಅವರ ಹೆಸರನ್ನು ರಾಜ್ಯ ಕಾಂಗ್ರೆಸ್, ಹೈಕಮಾಂಡ್‌ಗೆ ಶಿಫಾರಸು ಮಾಡಿದೆ’ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಯನಗರ ವಿಧಾನಸಭೆ ಚುನಾವಣೆ ಮರು ಮತ ಎಣಿಕೆಯಲ್ಲಿ ಅಧಿಕಾರಿಗಳಿಂದ ತಪ್ಪಾಗಿದೆ. ಈ ಬಗ್ಗೆ ಕಾನೂನು ಹೋರಾಟ ಮಾಡುತ್ತಿದ್ದು, ಸಾಬೀತಾದರೆ ಸೌಮ್ಯಾ ಅವರು ಮತ್ತೆ ಶಾಸಕಿಯಾಗುತ್ತಾರೆ’ ಎಂದರು.

‘ದಕ್ಷಿಣದಿಂದ ಸ್ಪರ್ಧಿಸುವಂತೆ 25 ವರ್ಷಗಳ ಹಿಂದೆ ನನಗೂ ಹೇಳಿದ್ದರು. ಆಗ ಸ್ಪರ್ಧೆಗೆ ನಿರಾಕರಿಸಿದ್ದೆ. ಈಗ, ನಾಲ್ಕೈದು ಯುವ ನಾಯಕರಿದ್ದು, ಅವರಲ್ಲೇ ಯಾರಿಗಾದರೂ ಅವಕಾಶ ಕೊಡಿ ಎಂದಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT