ಬೆಂಗಳೂರು: ಚೆನ್ನೈನ ಮೌನರಾಗಂ ಸಂಸ್ಥೆಯು ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಸ್ಮರಣಾರ್ಥ ‘ಸೆಲೆಬ್ರೇಟಿಂಗ್ ಎಸ್ಪಿಬಿಯಿಸಂ’ ಎಂಬ ವಿಶೇಷ ಸಂಗೀತ ಕಾರ್ಯಕ್ರಮವನ್ನು ಅ.9ರಂದು ಸಂಜೆ 6 ಗಂಟೆಗೆ ಬಸವನಗುಡಿಯ ಗಾಯನ ಸಮಾಜ ಸಭಾಂಗಣದಲ್ಲಿ ಆಯೋಜಿಸಿದೆ.
‘ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಗೌರವ ಸೂಚಿಸುವ ಸಲುವಾಗಿ ಹಮ್ಮಿಕೊಂಡಿರುವಕಾರ್ಯಕ್ರಮದಲ್ಲಿಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಪುತ್ರ ಎಸ್.ಪಿ.ಚರಣ್, ಗಾಯಕಿ ಪ್ರಿಯಾಂಕಾ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಬುಕ್ ಮೈ ಶೋನಲ್ಲಿ ಕಾರ್ಯಕ್ರಮದಟಿಕೆಟ್ಗಳು ಲಭ್ಯ’ ಎಂದು ಪ್ರಕಟಣೆ ತಿಳಿಸಿದೆ.