‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮದ ವಿವಿಧ ಸರ್ವೆ ನಂಬರ್ಗಳಲ್ಲಿ ಒಟ್ಟು 42 ಎಕರೆ 14 ಗುಂಟೆ ಜಮೀನನ್ನು ಮೋಹನ್ ಅವರು 2012 ಮತ್ತು 2013ರಲ್ಲಿ ಖರೀದಿಸಿದ್ದಾರೆ. ಈ ಸ್ಥಿರಾಸ್ತಿಯ ಮೊತ್ತ ₹ 33 ಕೋಟಿಗೂ ಹೆಚ್ಚಿದೆ. ಈ ಆಸ್ತಿ ವಿವರವನ್ನು 2019ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಪ್ರಮಾಣ ಪತ್ರದಲ್ಲಿ ಘೋಷಿಸಿಕೊಂಡಿಲ್ಲ’ ಎಂಬುದು ಫಿರ್ಯಾದುದಾರರ ಆರೋಪ.