ಬೆಂಗಳೂರು: ‘ಬಾಳಿನ ಗುರಿಗಳನ್ನು ಇಟ್ಟುಕೊಳ್ಳುವ ಮುನ್ನ ನಮ್ಮ ಪೂರ್ಣ ಸಾಮರ್ಥ್ಯದ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’ ಎಂದು ಈಶ ಫೌಂಡೇಷನ್ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಹೇಳಿದರು.
ನಗರದ ಜಯಮಹಲ್ ಪ್ಯಾಲೇಸ್ ಹೋಟೆಲ್ ಆವರಣದಲ್ಲಿಅಂಡರ್ – 25 ಯುವಜನರ ಶೃಂಗಸಭೆಯಲ್ಲಿ ಅವರು ಮಾತನಾಡಿದರು.
‘ಮಾನವನಾಗುವುದು ಹೇಗೆ, ಬದುಕಿನಲ್ಲಿ ಸರಿಯಾದ ಆಯ್ಕೆಗಳನ್ನು ಮಾಡುವುದು ಹೇಗೆ, ಕನಸುಗಳನ್ನು ನನಸಾಗಿಸುವ ಬಗೆ ಹೇಗೆ’ ಎಂಬ ಕುರಿತು ಮಾತನಾಡಿದ ಅವರು, ‘ಕನಸಿನಲ್ಲಿ ಕಲ್ಪಿಸಿಕೊಳ್ಳಲೂ ಅಸಾಧ್ಯವಾದದ್ದನ್ನು ಜೀವನದಲ್ಲಿ ಸಾಧಿಸುವಂತಾಗಬೇಕು’ ಎಂದರು.
ಹಿಂದಿನ ಮತ್ತು ಇಂದಿನ ಯುವಕರಿಗೂ ಇರುವ ವ್ಯತ್ಯಾಸ ಏನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ತಮ್ಮ ಕಾಲದ ಯುವ ಜನತೆ ತಮ್ಮ ಸಮುದಾಯ, ಸಮಾಜ ಮತ್ತು ಒಟ್ಟಾರೆ ರಾಷ್ಟ್ರದ ಒಳಿತಿಗಾಗಿ ಏನು ಬದಲಾವಣೆ ಮಾಡಬೇಕು ಎಂಬ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದರು. ಇಂದಿನ ಯುವ ಜನತೆ ತಮ್ಮ ವೈಯಕ್ತಿಕ ಜೀವನ ಮತ್ತು ಗುರಿಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ’ ಎಂದರು.