‘ಠಾಣೆ ಸಿಬ್ಬಂದಿ ಜೂನ್ 11ರಂದು ಬೆಳಿಗ್ಗೆ ಉದ್ಯಾನದಲ್ಲಿ ಗಸ್ತು ತಿರುಗುತ್ತಿದ್ದರು. ಪಾಪ್ಕಾರ್ನ್ ಮಳಿಗೆ ಬಳಿ ಸೇರಿದ್ದ ಜನ, ಆರೋಪಿ ನಯಾಜ್ನನ್ನು ತರಾಟೆಗೆ ತೆಗೆದುಕೊಂಡಿದ್ದರು. ಸ್ಥಳಕ್ಕೆ ಹೋಗಿದ್ದ ಸಿಬ್ಬಂದಿ ವಿಚಾರಿಸಿದ್ದರು. ‘ಎಣ್ಣೆಯಲ್ಲಿ ಎಂಜಲು ಉಗಿದು, ಅದರಲ್ಲೇ ಆಹಾರ ತಯಾರಿಸಿಕೊಡುತ್ತಿದ್ದಾನೆ’ ಎಂಬುದಾಗಿ ಸಾರ್ವಜನಿಕರು ದೂರಿದ್ದರು. ನಂತರವೇ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು’ ಎಂದೂ ತಿಳಿಸಿದರು.