<p><strong>ಬೆಂಗಳೂರು</strong>: ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಪರಿಷ್ಕೃತ ಮಾರ್ಗಸೂಚಿಯಂತೆ ಗ್ರಾಹಕರಿಗೆ ತಲಾ ₹ 1 ಲಕ್ಷ ವಿತರಿಸಲಾಗುತ್ತದೆ ಎಂಬ ಸುದ್ದಿ ತಿಳಿದು ನೂರಾರು ಗ್ರಾಹಕರು ಶನಿವಾರ ಬೆಳಿಗ್ಗೆ ಬಸವನಗುಡಿ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಮುಂದೆ ಜಮಾಯಿಸಿದ್ದರಿಂದ ಕೆಲ ಕಾಲ ಗೊಂದಲಮಯ ವಾತಾವರಣ ಉಂಟಾಯಿತು.</p>.<p>ಈ ಮುನ್ನ ಗ್ರಾಹಕರು ತಮ್ಮ ಖಾತೆಯಿಂದ ₹ 35 ಸಾವಿರದವರೆಗೆ ಹಣ ಹಿಂಪಡೆಯಲು ಆರ್ಬಿಐ ಅವಕಾಶ ಮಾಡಿಕೊಟ್ಟಿತ್ತು. ಆನಂತರ ಬ್ಯಾಂಕಿನ ಹಣಕಾಸು ಪರಿಸ್ಥಿತಿ ಗಮನದಲ್ಲಿ ಇಟ್ಟುಕೊಂಡು ₹ 1 ಲಕ್ಷ ದವರೆಗೆ ಡ್ರಾ ಮಾಡಬಹುದೆಂದು ಶುಕ್ರವಾರ ನಿರ್ದೇಶನ ನೀಡಿತ್ತು. ಇದರಿಂದಾಗಿ ನೂರಾರು ಗ್ರಾಹಕರು ಹಣ ಪಡೆಯಲು ಬ್ಯಾಂಕಿನ ಕಚೇರಿಗೆ ಧಾವಿಸಿದ್ದರು.</p>.<p>‘ಈ ಮಧ್ಯೆ, ಕೆಲವು ಹಿರಿಯ ನಾಗರಿಕರಿಗೆ ವೈದ್ಯಕೀಯ ವೆಚ್ಚಗಳಿಗಾಗಿ ಬ್ಯಾಂಕ್ ₹ 50 ಸಾವಿರ ವಿತರಿಸಿತ್ತು. ರಿಸರ್ವ್ ಬ್ಯಾಂಕ್ ನಿರ್ದೇಶನದಲ್ಲಿ ಮೊದಲಿನ ₹ 35 ಸಾವಿರ ಸೇರಿ ₹ 1ಲಕ್ಷ ಡ್ರಾ ಮಾಡಬಹುದು ಎಂದು ಹೇಳಲಾಗಿದೆ. ಬ್ಯಾಂಕ್ ಸಿಬ್ಬಂದಿ ಈ ಹಿಂದೆ ₹ 50 ಸಾವಿರ ಹಾಗೂ ₹ 35 ಸಾವಿರ ಹಿಂಪಡೆದ ಗ್ರಾಹಕರಿಗೆ ಮಿಕ್ಕ ₹ 15ಸಾವಿರ ಮಾತ್ರ ಡ್ರಾ ಮಾಡಲು ಅವಕಾಶ ನೀಡಿದರು. ಇದು ಗೊಂದಲಕ್ಕೆ ಕಾರಣವಾಯಿತು’ ಎಂದು ಸ್ಥಳದಲ್ಲಿದ್ದ ಎಸ್ಬಿಎಂ ನಿವೃತ್ತ ನೌಕರ ಕೆ. ಮುರಳೀಧರ ತಿಳಿಸಿದರು.</p>.<p>ಗೊಂದಲ ಪರಿಹಾರವಾದ ಬಳಿಕ ನಾಲ್ಕು ಕೌಂಟರ್ಗಳನ್ನು ವ್ಯವಸ್ಥೆ ಮಾಡಿ ತ್ವರಿತಗತಿಯಲ್ಲಿ ಹಣ ವಿತರಣೆಗೆ ವ್ಯವಸ್ಥೆ ಮಾಡಲಾಯಿತು.</p>.<p>ಸದ್ಯ ₹ 1 ಲಕ್ಷದವರೆಗೆ ಹಣ ಹಿಂಪಡೆಯಲು ಅವಕಾಶ ನೀಡಿರುವುದರಿಂದ ಶೇ 54ರಷ್ಟು ಗ್ರಾಹಕರು ತಮ್ಮ ಖಾತೆಯಿಂದ ಪೂರ್ಣ ಹಣ ತೆಗೆಯಲು ಸಾಧ್ಯವಾಗಲಿದೆ. ಉಳಿದಂತೆ ಎಲ್ಲ ಷರತ್ತುಗಳು ಮುಂದುವರಿಯಲಿವೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.</p>.<p>ಸಾವಿರಾರು ಗ್ರಾಹಕರು ಒಟ್ಟು ₹ 2000 ಕೋಟಿಗೂ ಅಧಿಕ ಹಣವನ್ನು ಬ್ಯಾಂಕ್ನಲ್ಲಿ ಹೂಡಿಕೆ ಮಾಡಿದ್ದಾರೆ. ₹ 1400 ಕೋಟಿ ಅವ್ಯವಹಾರ ನಡೆಸಿದ ಆರೋಪವು ವಜಾಗೊಂಡಿರುವ ಬ್ಯಾಂಕ್ ಆಡಳಿತ ಮಂಡಳಿ ಮೇಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಪರಿಷ್ಕೃತ ಮಾರ್ಗಸೂಚಿಯಂತೆ ಗ್ರಾಹಕರಿಗೆ ತಲಾ ₹ 1 ಲಕ್ಷ ವಿತರಿಸಲಾಗುತ್ತದೆ ಎಂಬ ಸುದ್ದಿ ತಿಳಿದು ನೂರಾರು ಗ್ರಾಹಕರು ಶನಿವಾರ ಬೆಳಿಗ್ಗೆ ಬಸವನಗುಡಿ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಮುಂದೆ ಜಮಾಯಿಸಿದ್ದರಿಂದ ಕೆಲ ಕಾಲ ಗೊಂದಲಮಯ ವಾತಾವರಣ ಉಂಟಾಯಿತು.</p>.<p>ಈ ಮುನ್ನ ಗ್ರಾಹಕರು ತಮ್ಮ ಖಾತೆಯಿಂದ ₹ 35 ಸಾವಿರದವರೆಗೆ ಹಣ ಹಿಂಪಡೆಯಲು ಆರ್ಬಿಐ ಅವಕಾಶ ಮಾಡಿಕೊಟ್ಟಿತ್ತು. ಆನಂತರ ಬ್ಯಾಂಕಿನ ಹಣಕಾಸು ಪರಿಸ್ಥಿತಿ ಗಮನದಲ್ಲಿ ಇಟ್ಟುಕೊಂಡು ₹ 1 ಲಕ್ಷ ದವರೆಗೆ ಡ್ರಾ ಮಾಡಬಹುದೆಂದು ಶುಕ್ರವಾರ ನಿರ್ದೇಶನ ನೀಡಿತ್ತು. ಇದರಿಂದಾಗಿ ನೂರಾರು ಗ್ರಾಹಕರು ಹಣ ಪಡೆಯಲು ಬ್ಯಾಂಕಿನ ಕಚೇರಿಗೆ ಧಾವಿಸಿದ್ದರು.</p>.<p>‘ಈ ಮಧ್ಯೆ, ಕೆಲವು ಹಿರಿಯ ನಾಗರಿಕರಿಗೆ ವೈದ್ಯಕೀಯ ವೆಚ್ಚಗಳಿಗಾಗಿ ಬ್ಯಾಂಕ್ ₹ 50 ಸಾವಿರ ವಿತರಿಸಿತ್ತು. ರಿಸರ್ವ್ ಬ್ಯಾಂಕ್ ನಿರ್ದೇಶನದಲ್ಲಿ ಮೊದಲಿನ ₹ 35 ಸಾವಿರ ಸೇರಿ ₹ 1ಲಕ್ಷ ಡ್ರಾ ಮಾಡಬಹುದು ಎಂದು ಹೇಳಲಾಗಿದೆ. ಬ್ಯಾಂಕ್ ಸಿಬ್ಬಂದಿ ಈ ಹಿಂದೆ ₹ 50 ಸಾವಿರ ಹಾಗೂ ₹ 35 ಸಾವಿರ ಹಿಂಪಡೆದ ಗ್ರಾಹಕರಿಗೆ ಮಿಕ್ಕ ₹ 15ಸಾವಿರ ಮಾತ್ರ ಡ್ರಾ ಮಾಡಲು ಅವಕಾಶ ನೀಡಿದರು. ಇದು ಗೊಂದಲಕ್ಕೆ ಕಾರಣವಾಯಿತು’ ಎಂದು ಸ್ಥಳದಲ್ಲಿದ್ದ ಎಸ್ಬಿಎಂ ನಿವೃತ್ತ ನೌಕರ ಕೆ. ಮುರಳೀಧರ ತಿಳಿಸಿದರು.</p>.<p>ಗೊಂದಲ ಪರಿಹಾರವಾದ ಬಳಿಕ ನಾಲ್ಕು ಕೌಂಟರ್ಗಳನ್ನು ವ್ಯವಸ್ಥೆ ಮಾಡಿ ತ್ವರಿತಗತಿಯಲ್ಲಿ ಹಣ ವಿತರಣೆಗೆ ವ್ಯವಸ್ಥೆ ಮಾಡಲಾಯಿತು.</p>.<p>ಸದ್ಯ ₹ 1 ಲಕ್ಷದವರೆಗೆ ಹಣ ಹಿಂಪಡೆಯಲು ಅವಕಾಶ ನೀಡಿರುವುದರಿಂದ ಶೇ 54ರಷ್ಟು ಗ್ರಾಹಕರು ತಮ್ಮ ಖಾತೆಯಿಂದ ಪೂರ್ಣ ಹಣ ತೆಗೆಯಲು ಸಾಧ್ಯವಾಗಲಿದೆ. ಉಳಿದಂತೆ ಎಲ್ಲ ಷರತ್ತುಗಳು ಮುಂದುವರಿಯಲಿವೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.</p>.<p>ಸಾವಿರಾರು ಗ್ರಾಹಕರು ಒಟ್ಟು ₹ 2000 ಕೋಟಿಗೂ ಅಧಿಕ ಹಣವನ್ನು ಬ್ಯಾಂಕ್ನಲ್ಲಿ ಹೂಡಿಕೆ ಮಾಡಿದ್ದಾರೆ. ₹ 1400 ಕೋಟಿ ಅವ್ಯವಹಾರ ನಡೆಸಿದ ಆರೋಪವು ವಜಾಗೊಂಡಿರುವ ಬ್ಯಾಂಕ್ ಆಡಳಿತ ಮಂಡಳಿ ಮೇಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>