<p><strong>ಬೆಂಗಳೂರು</strong>: ‘ವಿದ್ಯೆ ನಮಗೆ ಉಪ ಜೀವನವಾಗಿದ್ದು, ವಿದ್ಯೆಯನ್ನು ಆಶ್ರಯಿಸಿಕೊಂಡು ಬದುಕಿದ್ದೇವೆ. ಆದರೆ, ವಿದ್ಯಾಜೀವನರಾಗಿ ಆದರ್ಶರಾದವರು ರಾಮಚಂದ್ರರಾಯರು’ ಎಂದು ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ವರಖೇಡಿ ಅಭಿಪ್ರಾಯಪಟ್ಟರು. </p>.<p>ರಾಷ್ಟ್ರೋತ್ಥಾನ ಸಾಹಿತ್ಯ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ವಾಂಸ ಪ್ರೊ.ಸಾ.ಕೃ.ರಾಮಚಂದ್ರರಾವ್ ಅವರ ಜನ್ಮಶತಾಬ್ದಿ ಸಂಸ್ಮರಣ ಗ್ರಂಥ ‘ವಿದ್ಯಾಲಂಕಾರ’ ಜನಾರ್ಪಣೆ ಮಾಡಿ, ಮಾತನಾಡಿದರು.</p>.<p>‘ರಾಮಚಂದ್ರರಾಯರನ್ನು ಯಾವುದೇ ಒಂದು ಆಯಾಮದಿಂದ ಅಥವಾ ಯಾವುದೇ ಒಬ್ಬ ವಿದ್ವಾಂಸರಿಂದ ಅರಿಯಲು ಸಾಧ್ಯವಿಲ್ಲ. ವಿದ್ವಾಂಸರಿಗೆ ಅಹಂಕಾರ ಬರಬಾರದೆಂಬ ಉದ್ದೇಶದಿಂದಲೇ ಭಗವಂತ ಇಂತಹವರನ್ನು ಸೃಷ್ಟಿ ಮಾಡುತ್ತಾನೆ. ಅವರದ್ದು ಕೇವಲ ಓದಿನಿಂದ ಬಂದ ವಿದ್ಯೆಯಾಗಿರಲಿಲ್ಲ. ಅವರು ಯಾವುದೇ ಒಂದು ಸೀಮೆಗೂ ಒಳಪಟ್ಟಿರಲಿಲ್ಲ. ಅವರನ್ನು ತಿಳಿಯಲು ಈ ಕೃತಿ ಮಾರ್ಗವಾಗಲಿದೆ’ ಎಂದು ಹೇಳಿದರು. </p>.<p>ಬಹುಭಾಷಾ ವಿದ್ವಾಂಸ ಆರ್. ಗಣೇಶ್, ‘ಕೃತಿಯಲ್ಲಿ ಅವರ ವಿದ್ವತ್ತು ಮತ್ತು ವ್ಯಕ್ತಿತ್ವದ ಬಗ್ಗೆ ವಿವರಿಸಲಾಗಿದೆ. ಆದರ್ಶದ ಕುರಿತು ಬರೆಯುವುದು ಸುಲಭ. ಆದರೆ, ಬಾಳುವುದು ಕಷ್ಟ. ರಾಮಚಂದ್ರರಾಯರು ಬರೆದಂತೆ ಬದುಕಿದ್ದಾರೆ. ಅವರು ಗೌರವ, ಪುರಸ್ಕಾರವನ್ನು ಅಪೇಕ್ಷಿಸಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.</p>.<p>ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ, ‘ಇದು ಅಪರೂಪದ ಗ್ರಂಥವಾಗಿದೆ. ಅವರು ಅಪಾರ ಪ್ರತಿಭೆ ಹೊಂದಿದ್ದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಸಾ.ಕೃ.ರಾಮಚಂದ್ರರಾವ್ ಅವರ ಜತೆಗಿನ ಒಡನಾಟವನ್ನು ಸ್ಮರಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ವಿದ್ಯೆ ನಮಗೆ ಉಪ ಜೀವನವಾಗಿದ್ದು, ವಿದ್ಯೆಯನ್ನು ಆಶ್ರಯಿಸಿಕೊಂಡು ಬದುಕಿದ್ದೇವೆ. ಆದರೆ, ವಿದ್ಯಾಜೀವನರಾಗಿ ಆದರ್ಶರಾದವರು ರಾಮಚಂದ್ರರಾಯರು’ ಎಂದು ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ವರಖೇಡಿ ಅಭಿಪ್ರಾಯಪಟ್ಟರು. </p>.<p>ರಾಷ್ಟ್ರೋತ್ಥಾನ ಸಾಹಿತ್ಯ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ವಾಂಸ ಪ್ರೊ.ಸಾ.ಕೃ.ರಾಮಚಂದ್ರರಾವ್ ಅವರ ಜನ್ಮಶತಾಬ್ದಿ ಸಂಸ್ಮರಣ ಗ್ರಂಥ ‘ವಿದ್ಯಾಲಂಕಾರ’ ಜನಾರ್ಪಣೆ ಮಾಡಿ, ಮಾತನಾಡಿದರು.</p>.<p>‘ರಾಮಚಂದ್ರರಾಯರನ್ನು ಯಾವುದೇ ಒಂದು ಆಯಾಮದಿಂದ ಅಥವಾ ಯಾವುದೇ ಒಬ್ಬ ವಿದ್ವಾಂಸರಿಂದ ಅರಿಯಲು ಸಾಧ್ಯವಿಲ್ಲ. ವಿದ್ವಾಂಸರಿಗೆ ಅಹಂಕಾರ ಬರಬಾರದೆಂಬ ಉದ್ದೇಶದಿಂದಲೇ ಭಗವಂತ ಇಂತಹವರನ್ನು ಸೃಷ್ಟಿ ಮಾಡುತ್ತಾನೆ. ಅವರದ್ದು ಕೇವಲ ಓದಿನಿಂದ ಬಂದ ವಿದ್ಯೆಯಾಗಿರಲಿಲ್ಲ. ಅವರು ಯಾವುದೇ ಒಂದು ಸೀಮೆಗೂ ಒಳಪಟ್ಟಿರಲಿಲ್ಲ. ಅವರನ್ನು ತಿಳಿಯಲು ಈ ಕೃತಿ ಮಾರ್ಗವಾಗಲಿದೆ’ ಎಂದು ಹೇಳಿದರು. </p>.<p>ಬಹುಭಾಷಾ ವಿದ್ವಾಂಸ ಆರ್. ಗಣೇಶ್, ‘ಕೃತಿಯಲ್ಲಿ ಅವರ ವಿದ್ವತ್ತು ಮತ್ತು ವ್ಯಕ್ತಿತ್ವದ ಬಗ್ಗೆ ವಿವರಿಸಲಾಗಿದೆ. ಆದರ್ಶದ ಕುರಿತು ಬರೆಯುವುದು ಸುಲಭ. ಆದರೆ, ಬಾಳುವುದು ಕಷ್ಟ. ರಾಮಚಂದ್ರರಾಯರು ಬರೆದಂತೆ ಬದುಕಿದ್ದಾರೆ. ಅವರು ಗೌರವ, ಪುರಸ್ಕಾರವನ್ನು ಅಪೇಕ್ಷಿಸಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.</p>.<p>ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ, ‘ಇದು ಅಪರೂಪದ ಗ್ರಂಥವಾಗಿದೆ. ಅವರು ಅಪಾರ ಪ್ರತಿಭೆ ಹೊಂದಿದ್ದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಸಾ.ಕೃ.ರಾಮಚಂದ್ರರಾವ್ ಅವರ ಜತೆಗಿನ ಒಡನಾಟವನ್ನು ಸ್ಮರಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>