ಬೆಂಗಳೂರು: ಕಾರ್ಮೆಲ್ ಮಾತೆಯ ಚರ್ಚ್ ವತಿಯಿಂದ ಏಪ್ರಿಲ್ 21ರಂದು ತಟ್ಟಗುಪ್ಪೆಯಲ್ಲಿ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಧರ್ಮಗುರು ಎ.ಥಾಮಸ್, ‘ನಾಟಕ ತಂಡಗಳಿಗೆ ಪ್ರೋತ್ಸಾಹ ನೀಡಲುರಾಜ್ಯ ಮಟ್ಟದ ನಾಟಕ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ವಿಜೇತ ತಂಡಕ್ಕೆ ₹50 ಸಾವಿರ ಮತ್ತು ಫಲಕ ಹಾಗೂ ಎರಡನೇ ಸ್ಥಾನ ಪಡೆಯುವ ತಂಡಕ್ಕೆ ₹40 ಸಾವಿರ ಮತ್ತು ಫಲಕವನ್ನು ಬಹುಮಾನವಾಗಿ ನೀಡಲಾಗುವುದು’ ಎಂದರು.
‘ನಾಟಕ ತಂಡಗಳು ₹1,000 ನೀಡಿ ಇದೇ 30ರ ಒಳಗೆ ನೋಂದಣಿ ಮಾಡಿಸಿಕೊಳ್ಳಬಹುದು. ತಟ್ಟಗುಪ್ಪೆಯಕಾರ್ಮೆಲ್ ಮಾತೆಯ ಚರ್ಚ್,ರವೀಂದ್ರ ಕಲಾಕ್ಷೇತ್ರದ ಹತ್ತಿರ ಇರುವ ಕ್ಯಾಂಟೀನ್, ಟೌನ್ ಹಾಲ್ಕ್ಯಾಂಟಿನ್ ಮತ್ತು ಬೇಗೂರಿನ ವಾಸು ಎಂಬುವರರಲ್ಲಿ ನೋಂದಣಿ ಅರ್ಜಿ ದೊರೆಯುತ್ತದೆ’ ಎಂದರು.