ಬೆಂಗಳೂರು: ಉಪನಗರ ರೈಲು ಯೋಜನೆಗೆ ಪಿಂಕ್ ಬುಕ್ನಲ್ಲಿ ₹1 ಕೋಟಿ ಮೀಸಲಿಟ್ಟಿದ್ದರೂ, ‘ಈ ವರ್ಷವೇ ಕಾಮಗಾರಿ ಆರಂಭವಾಗುವ ಬಗ್ಗೆ ಅನುಮಾನ ಬೇಡ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ. ಆದರೆ, ಯೋಜನೆ ಆರಂಭಿಸಲು ಕನಿಷ್ಠ ₹1 ಸಾವಿರ ಕೋಟಿ ಅನುದಾನ ಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ.