‘ಲೀಲಾವತಿ ಅವರು ಆಕಾಶವಾಣಿ ಹಾಗೂ ತಮ್ಮ ಸಂಗೀತ ಕಛೇರಿಗಳಲ್ಲಿ ಶಿಸ್ತು ತಂದಿದ್ದರು. ಅವರು ಹಾಕಿಕೊಟ್ಟ ದಾರಿಯಲ್ಲಿ ನಮ್ಮ ಗಾಯಕರೂ ಸಾಗಿದರು. ಅನಂತಸ್ವಾಮಿ, ಶಿವಮೊಗ್ಗ ಸುಬ್ಬಣ್ಣ, ಅಶ್ವತ್ಥ್ ಮೊದಲಾದವರು ತಮ್ಮ ಕಛೇರಿಗಳಲ್ಲಿ ಭಾವಗೀತೆ
ಬಿಟ್ಟು ಬೇರೆ ಹಾಡಲಿಲ್ಲ. ಈ ಪರಂಪರೆಯ ಆದಿಬಿಂದು ಲೀಲಾವತಿ. ಸುಗಮ ಸಂಗೀತಕ್ಕೆ ಮೇಲ್ಪಕ್ತಿ
ಹಾಕಿಕೊಟ್ಟಿದ್ದರು’ ಎಂದು ಅವರು ಹೇಳಿದರು.