ಅಷ್ಟಕ್ಕೆ ಸುಮ್ಮನಾಗದ ವೃದ್ಧರು, ‘ಈಗಾಗಲೇ ಹಲವರಿಗೆ ದೂರು ನೀಡಿದ್ದೇನೆ. ಯಾವುದೇ ಪ್ರಯೋಜನವಾಗಿಲ್ಲ’ ಎಂದು ಕೂಗುತ್ತಲೇ ಜೇಬಿನಲ್ಲಿದ್ದ ವಿಷದ ಬಾಟಲಿ ಹೊರತೆಗೆದು ಕುಡಿಯುಲು ಮುಂದಾಗಿದ್ದರು. ಅದನ್ನು ನೋಡಿದ ಪೊಲೀಸರು, ವಿಷದ ಬಾಟಲಿ ಕಸಿದುಕೊಂಡು ಚಂದ್ರಶೇಖರ್ ಅವರನ್ನು ಬೇರೆಡೆ ಕರೆದೊಯ್ದು ಮಾಹಿತಿ ಪಡೆದುಕೊಂಡರು. ಮುಖ್ಯಮಂತ್ರಿ ಸಹ, ವೃದ್ಧನಿಗಾಗ ಅನ್ಯಾಯ ಸರಿಪಡಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.