ವಿಶೇಷ ಆಯುಕ್ತ(ಕಸ ವಿಲೇವಾರಿ) ಡಿ.ರಂದೀಪ್,'ನಗರವನ್ನು ಸ್ವಚ್ಛ ಸುಂದರವಾಗಿ ಮಾಡಲು ಪಾಲಿಕೆ ಕಸ ವಿಲೇವಾರಿ ಪದ್ದತಿಯಲ್ಲಿ ಅನೇಕ ಬದಲಾವಣೆಗಳನ್ನು ಜಾರಿಗೆ ತಂದಿದೆ. ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ನಾಗರಿಕರು ಉತ್ತಮ ಪ್ರತಿಕ್ರಿಯೆ ನೀಡಿದರೆ ನಗರಕ್ಕೆ ಉತ್ತಮ ಅಂಕ ಸಿಗಲಿದೆ. ರಂಗೋಲಿ ಹಬ್ಬ, ಸ್ವಚ್ಛತಾ ಆಂದೋಲನ, ಬೀದಿ ನಾಟಕಗಳ ಮೂಲಕ ಈ ಅಭಿಯಾನದ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ' ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಆಯುಕ್ತ (ಆಡಳಿತ) ಜೆ.ಮಂಜುನಾಥ್, ಜಂಟಿ ಆಯುಕ್ತ (ಕಸ ವಿಲೇವಾರಿ) ಸರ್ಫರಾಜ್ ಖಾನ್, ಮುಖ್ಯ ಎಂಜಿನಿಯರ್ (ಕಸ ವಿಲೇವಾರಿ) ವಿಶ್ವನಾಥ್ ಭಾಗವಹಿಸಿದರು.