ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ‘ನಿಸರ್ಗ, ಆಧ್ಯಾತ್ಮಿಕತೆ ಹಾಗೂ ರಾಷ್ಟ್ರೀಯತೆಗೆ ಪ್ರಥಮ ಆದ್ಯತೆ ನೀಡಬೇಕು. ನಾವು ವಿಶ್ವವೇ ಒಂದು ಕುಟುಂಬ ಎಂಬ ಪರಿಕಲ್ಪನೆಯಡಿ ಜೀವಿಸುತ್ತಿದ್ದೇವೆ. ಯಾರಿಗೂ ಕೆಡುಕನ್ನು ಬಯಸಬಾರದು. ಶ್ಯಾಮ ಪ್ರಸಾದ್ ಮುಖರ್ಜಿ ಅವರು ರಾಷ್ಟ್ರೀಯತೆ ವಿಚಾರವಾಗಿಯೇ ರಾಜೀನಾಮೆ ನೀಡಿದ್ದರು’ ಎಂದು ತಿಳಿಸಿದರು.