ಮಂಡ್ಸೌರ್ ರೈತ ಹುತಾತ್ಮರ ಸ್ಮರಣೆಯ ಅಂಗವಾಗಿ, ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್ಸಿಸಿ), ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಹಯೋಗದಲ್ಲಿ ‘ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ' ಹಾಗೂ 'ಋಣ ಮುಕ್ತ ಕಾಯ್ದೆ'ಗಾಗಿ ಬುಧವಾರ, ರೇಸ್ಕೋರ್ಸ್ ರಸ್ತೆಯ ಮೌರ್ಯ ಹೊಟೇಲ್ ಹತ್ತಿರ ಪ್ರತಿಭಟನಾ ಧರಣಿ ನಡೆಸಿತು.