ಹಿಂಬಾಲಿಸಿ ಕೃತ್ಯ: ‘ಅಪರಾಧ ಹಿನ್ನೆಲೆಯುಳ್ಳ ಗುನ್ನಾಲ್ ಹಾಗೂ ಚಂದ್ರು, ಸ್ವಿಗ್ಗಿ ಬಾಯ್ ಅವರನ್ನು ಹಿಂಬಾಲಿಸಿದ್ದರು. ಅವರ ಬಳಿ ಹಣವಿರಬಹುದೆಂದು ತಿಳಿದು, ಅದನ್ನು ಕಿತ್ತುಕೊಳ್ಳಲು ದ್ವಿಚಕ್ರ ವಾಹನ ಅಡ್ಡಗಟ್ಟಿದ್ದರು. ಹಣವಿಲ್ಲದಿದ್ದಾಗ ವಾಹನ ಹಾಗೂ ಮೊಬೈಲ್ ಸುಲಿಗೆ ಮಾಡಿಕೊಂಡು ಹೋಗಿದ್ದರು’ ಎಂದು ಪೊಲೀಸರು ಹೇಳಿದರು.