<p><strong>ಬೆಂಗಳೂರು:</strong> ‘ಸ್ವಿಗ್ಗಿ’ ಆ್ಯಪ್ ಮೂಲಕ ಆಹಾರ ಪೂರೈಸುವ ಡೆಲಿವರಿ ಬಾಯ್ಯೊಬ್ಬರನ್ನು ಸುಲಿಗೆ ಮಾಡಲಾಗಿದ್ದು, ಈ ಸಂಬಂಧ ಆರೋಪಿ ಗುನ್ನಾಲ್ (25) ಎಂಬಾತನನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.</p>.<p>‘ಗ್ರಾಹಕರೊಬ್ಬರಿಗೆ ಆಹಾರದ ಪೊಟ್ಟಣ ಕೊಟ್ಟು ಡೆಲಿವರಿ ಬಾಯ್ ವಾಪಸು ಮನೆಗೆ ಹೊರಟಿದ್ದಾಗ ಅಡ್ಡಗಟ್ಟಿ ಸುಲಿಗೆ ಮಾಡಲಾಗಿತ್ತು. ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.</p>.<p>‘ಸುಲಿಗೆ ಮಾಡಿದ್ದ ದ್ವಿಚಕ್ರ ವಾಹನ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಆರೋಪಿ ಚಂದ್ರು ತಲೆಮರೆಸಿಕೊಂಡಿದ್ದಾನೆ’ ಎಂದೂ ತಿಳಿಸಿದರು.</p>.<p class="Subhead"><strong>ಹಿಂಬಾಲಿಸಿ ಕೃತ್ಯ:</strong> ‘ಅಪರಾಧ ಹಿನ್ನೆಲೆಯುಳ್ಳ ಗುನ್ನಾಲ್ ಹಾಗೂ ಚಂದ್ರು, ಸ್ವಿಗ್ಗಿ ಬಾಯ್ ಅವರನ್ನು ಹಿಂಬಾಲಿಸಿದ್ದರು. ಅವರ ಬಳಿ ಹಣವಿರಬಹುದೆಂದು ತಿಳಿದು, ಅದನ್ನು ಕಿತ್ತುಕೊಳ್ಳಲು ದ್ವಿಚಕ್ರ ವಾಹನ ಅಡ್ಡಗಟ್ಟಿದ್ದರು. ಹಣವಿಲ್ಲದಿದ್ದಾಗ ವಾಹನ ಹಾಗೂ ಮೊಬೈಲ್ ಸುಲಿಗೆ ಮಾಡಿಕೊಂಡು ಹೋಗಿದ್ದರು’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಸ್ವಿಗ್ಗಿ’ ಆ್ಯಪ್ ಮೂಲಕ ಆಹಾರ ಪೂರೈಸುವ ಡೆಲಿವರಿ ಬಾಯ್ಯೊಬ್ಬರನ್ನು ಸುಲಿಗೆ ಮಾಡಲಾಗಿದ್ದು, ಈ ಸಂಬಂಧ ಆರೋಪಿ ಗುನ್ನಾಲ್ (25) ಎಂಬಾತನನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.</p>.<p>‘ಗ್ರಾಹಕರೊಬ್ಬರಿಗೆ ಆಹಾರದ ಪೊಟ್ಟಣ ಕೊಟ್ಟು ಡೆಲಿವರಿ ಬಾಯ್ ವಾಪಸು ಮನೆಗೆ ಹೊರಟಿದ್ದಾಗ ಅಡ್ಡಗಟ್ಟಿ ಸುಲಿಗೆ ಮಾಡಲಾಗಿತ್ತು. ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.</p>.<p>‘ಸುಲಿಗೆ ಮಾಡಿದ್ದ ದ್ವಿಚಕ್ರ ವಾಹನ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಆರೋಪಿ ಚಂದ್ರು ತಲೆಮರೆಸಿಕೊಂಡಿದ್ದಾನೆ’ ಎಂದೂ ತಿಳಿಸಿದರು.</p>.<p class="Subhead"><strong>ಹಿಂಬಾಲಿಸಿ ಕೃತ್ಯ:</strong> ‘ಅಪರಾಧ ಹಿನ್ನೆಲೆಯುಳ್ಳ ಗುನ್ನಾಲ್ ಹಾಗೂ ಚಂದ್ರು, ಸ್ವಿಗ್ಗಿ ಬಾಯ್ ಅವರನ್ನು ಹಿಂಬಾಲಿಸಿದ್ದರು. ಅವರ ಬಳಿ ಹಣವಿರಬಹುದೆಂದು ತಿಳಿದು, ಅದನ್ನು ಕಿತ್ತುಕೊಳ್ಳಲು ದ್ವಿಚಕ್ರ ವಾಹನ ಅಡ್ಡಗಟ್ಟಿದ್ದರು. ಹಣವಿಲ್ಲದಿದ್ದಾಗ ವಾಹನ ಹಾಗೂ ಮೊಬೈಲ್ ಸುಲಿಗೆ ಮಾಡಿಕೊಂಡು ಹೋಗಿದ್ದರು’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>