ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಸೀತಾರಾಮ್ ಅವರು 40 ವರ್ಷಗಳಿಂದ ಪರಿಚಯ. ಬದುಕಿನ ಎಲ್ಲ ಸ್ತರದ ಅನುಭವವನ್ನು ಅವರು ಪಡೆದಿದ್ದಾರೆ. 1985ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗೌರಿಬಿದನೂರು ಕ್ಷೇತ್ರಕ್ಕೆ ಜನತಾ ಪಕ್ಷದಿಂದ ಟಿ.ಎನ್. ಸೀತಾರಾಮ್ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರ ಬದಲು ‘ಮುಖ್ಯಮಂತ್ರಿ’ ಚಂದ್ರು ಅವರಿಗೆ ಟಿಕೆಟ್ ದೊರೆಯಿತು. ಒಂದು ವೇಳೆ ಸೀತಾರಾಮ್ ಅವರಿಗೆ ಟಿಕೆಟ್ ಸಿಕ್ಕಿದ್ದರೆ ಅವರು ಜಯಿಸಿ, ಮಂತ್ರಿಯಾಗುವ ಸಾಧ್ಯತೆಯಿತ್ತು. ಅವರು ರಾಮಕೃಷ್ಣ ಹೆಗಡೆ ಅವರಿಗೆ ಆಪ್ತರಾಗಿದ್ದರು. ಆಗ ನಾನು ಮಂತ್ರಿಯಾಗುತ್ತಿದ್ದೆನೋ ಇಲ್ಲವೋ’ ಎಂದು ಹಾಸ್ಯ ಚಟಾಕಿ ಹಾರಿಸಿದರು.