ಕಾರನ್ನು ಸರ್ವಿಸ್ಗೆ ಕೊಡುವು ದಾಗಿ ಮನೆಯಲ್ಲಿ ಹೇಳಿ ಕುರುಬರಹಳ್ಳಿ ಜಂಕ್ಷನ್ಗೆ ಬಂದಿದ್ದ ವಿಜಯಕುಮಾರ್ ಪಾದಚಾರಿ ಒಬ್ಬರನ್ನು ಕರೆದು, ‘ನನಗೆ ತುಂಬಾ ಸುಸ್ತಾಗುತ್ತಿದೆ. ಕಾರಿನಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯುತ್ತೇನೆ. ನಾನು ಕಾರಿನ ಒಳಗೆ ಕುಳಿತ ಮೇಲೆ ಕವರ್ ಮುಚ್ಚಿ’ ಎಂದು ವಿನಂತಿಸಿದ್ದರು. ಅದರಂತೆ ಅವರು ಕವರ್ ಮುಚ್ಚಿ ತೆರಳಿದ್ದರು. ಇದನ್ನು ಪಕ್ಕದಲ್ಲಿ ಪಾನೀಪೂರಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಗಮನಿಸಿದ್ದರು. ಅದೇ ಸ್ಥಳದಲ್ಲಿ ನಿತ್ಯ ಕಾರು ನಿಲು ಗಡೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಬಂದು ಕಾರು ಯಾರದ್ದು ಎಂದು ಪಾನೀಪೂರಿ ಮಾರಾಟಗಾರರನ್ನು ಪ್ರಶ್ನಿಸಿದ್ದರು. ಕಾರಿನ ಮಾಲೀಕರು ಕಾರಿನಲ್ಲಿ ಇದ್ದಾರೆ ಎಂದು ತಿಳಿದಾಗ ಬಾಗಿಲು ತೆರೆದು ಪರಿಶೀಲನೆ ನಡೆಸಿದರು. ಒದ್ದಾಟ ನಡೆಸುತ್ತಿರುವುದು ಕಂಡುಬಂದಿತ್ತು. ಪೊಲೀಸರ ನೆರವಿನಿಂದ ಆಸ್ಪತ್ರೆಗೆ ಕೊರೆದೊಯ್ಯುವ ಮಾರ್ಗ ಮಧ್ಯದಲ್ಲಿ ಟೆಕಿ ಮೃತಪಟ್ಟರು’ ಎಂದು ಹೇಳಿವೆ.