<p><strong>ಬೆಂಗಳೂರು:</strong> ಕೋವಿಡ್ ಕಾರಣ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್) ಈಗಾಗಲೇ ಚಿಕಿತ್ಸೆ ಪಡೆದಿರುವ ಹಳೆಯ ರೋಗಿಗಳಿಗೆ ನೆರವಾಗಲು ದೂರವಾಣಿ ಸೇವೆ ಆರಂಭಿಸಿದೆ.</p>.<p>ಕೋವಿಡ್ 2ನೇ ಅಲೆ ಬಳಿಕ ಆಸ್ಪತ್ರೆ ಚಿಕಿತ್ಸೆ ಅಗತ್ಯ ಇರುವವರಿಗೆ ಕೋವಿಡ್ ಪರೀಕ್ಷೆ ನಡೆಸಿ, ಅಲ್ಲಿ ದಾಖಲಿಸಿಕೊಳ್ಳಲಾಗುತ್ತಿದೆ.</p>.<p>‘ಮಾನಸಿಕ ಅನಾರೋಗ್ಯ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಲಕ್ಷಾಂತರ ಮಂದಿ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅವರಲ್ಲಿ ಹಲವರು ಫಾಲೋ ಅಪ್ ಚಿಕಿತ್ಸೆ ಯಲ್ಲಿದ್ದಾರೆ. ಕೋವಿಡ್, ಲಾಕ್ಡೌನ್ ಕಾರಣ ಸಂಸ್ಥೆಗೆ ಬಂದು ಆರೋಗ್ಯ ಸೌಲಭ್ಯ ಪಡೆಯಲು ಬಹುತೇಕರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರತ್ಯೇಕ ದೂರವಾಣಿ ಸಂಖ್ಯೆಯನ್ನು ಮೀಸಲಿಡಲಾಗಿದೆ. ಸೇವೆ ಅಗತ್ಯ ಇರುವವರು ಕರೆ ಮಾಡಿ, ಸಲಹೆ ಗಳನ್ನು ಪಡೆಯಬಹುದು’ ಎಂದು ಸಂಸ್ಥೆಯ ಮನೋವೈದ್ಯಶಾಸ್ತ್ರ ವಿಭಾ ಗದ ಪ್ರಾಧ್ಯಾಪಕ ಡಾ. ಜಗದೀಶ್ ತೀರ್ಥಳ್ಳಿ ತಿಳಿಸಿದ್ದಾರೆ.</p>.<p>‘ವೈದ್ಯರು ರೋಗಿಗಳ ಸಮಸ್ಯೆ ಯನ್ನು ದೂರವಾಣಿ ಮೂಲಕ ಆಲಿಸಿ, ಚಿಕಿತ್ಸೆ, ಔಷಧ ಸೂಚಿಸಲಿದ್ದಾರೆ. ಈ ಸೇವೆಯು ಈಗಾಗಲೇ ಸಂಸ್ಥೆಯಲ್ಲಿ ನೋಂದಾಯಿತರಾದ (ಈ ಹಿಂದೆ ಚಿಕಿತ್ಸೆ ಪಡೆದ) ರೋಗಿಗಳಿಗೆ ಮಾತ್ರ ಲಭ್ಯವಿರಲಿದೆ’ ಎಂದು ಹೇಳಿದ್ದಾರೆ.</p>.<p>ದೂರವಾಣಿ: 080 4680 1771 (ಬೆಳಿಗ್ಗೆ 10 ರಿಂದ ಮಧ್ಯಾಹ್ನ 4).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೋವಿಡ್ ಕಾರಣ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್) ಈಗಾಗಲೇ ಚಿಕಿತ್ಸೆ ಪಡೆದಿರುವ ಹಳೆಯ ರೋಗಿಗಳಿಗೆ ನೆರವಾಗಲು ದೂರವಾಣಿ ಸೇವೆ ಆರಂಭಿಸಿದೆ.</p>.<p>ಕೋವಿಡ್ 2ನೇ ಅಲೆ ಬಳಿಕ ಆಸ್ಪತ್ರೆ ಚಿಕಿತ್ಸೆ ಅಗತ್ಯ ಇರುವವರಿಗೆ ಕೋವಿಡ್ ಪರೀಕ್ಷೆ ನಡೆಸಿ, ಅಲ್ಲಿ ದಾಖಲಿಸಿಕೊಳ್ಳಲಾಗುತ್ತಿದೆ.</p>.<p>‘ಮಾನಸಿಕ ಅನಾರೋಗ್ಯ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಲಕ್ಷಾಂತರ ಮಂದಿ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅವರಲ್ಲಿ ಹಲವರು ಫಾಲೋ ಅಪ್ ಚಿಕಿತ್ಸೆ ಯಲ್ಲಿದ್ದಾರೆ. ಕೋವಿಡ್, ಲಾಕ್ಡೌನ್ ಕಾರಣ ಸಂಸ್ಥೆಗೆ ಬಂದು ಆರೋಗ್ಯ ಸೌಲಭ್ಯ ಪಡೆಯಲು ಬಹುತೇಕರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರತ್ಯೇಕ ದೂರವಾಣಿ ಸಂಖ್ಯೆಯನ್ನು ಮೀಸಲಿಡಲಾಗಿದೆ. ಸೇವೆ ಅಗತ್ಯ ಇರುವವರು ಕರೆ ಮಾಡಿ, ಸಲಹೆ ಗಳನ್ನು ಪಡೆಯಬಹುದು’ ಎಂದು ಸಂಸ್ಥೆಯ ಮನೋವೈದ್ಯಶಾಸ್ತ್ರ ವಿಭಾ ಗದ ಪ್ರಾಧ್ಯಾಪಕ ಡಾ. ಜಗದೀಶ್ ತೀರ್ಥಳ್ಳಿ ತಿಳಿಸಿದ್ದಾರೆ.</p>.<p>‘ವೈದ್ಯರು ರೋಗಿಗಳ ಸಮಸ್ಯೆ ಯನ್ನು ದೂರವಾಣಿ ಮೂಲಕ ಆಲಿಸಿ, ಚಿಕಿತ್ಸೆ, ಔಷಧ ಸೂಚಿಸಲಿದ್ದಾರೆ. ಈ ಸೇವೆಯು ಈಗಾಗಲೇ ಸಂಸ್ಥೆಯಲ್ಲಿ ನೋಂದಾಯಿತರಾದ (ಈ ಹಿಂದೆ ಚಿಕಿತ್ಸೆ ಪಡೆದ) ರೋಗಿಗಳಿಗೆ ಮಾತ್ರ ಲಭ್ಯವಿರಲಿದೆ’ ಎಂದು ಹೇಳಿದ್ದಾರೆ.</p>.<p>ದೂರವಾಣಿ: 080 4680 1771 (ಬೆಳಿಗ್ಗೆ 10 ರಿಂದ ಮಧ್ಯಾಹ್ನ 4).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>