ಕಿರಣ್ ತೋಟಂಬೈಲ್, ಚೇತನ್ ರಾಜ್, ಧರ್ಮೇಂದ್ರ ಕುಮಾರ್ ಅರೇಹಳ್ಳಿ, ದಿನೇಶ್ ಬಾಬು ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಧೀಶರು, ಪ್ರತಿವಾದಿಗಳು ಮತ್ತು ಅವರ ನೌಕರರು, ಏಜೆಂಟರು, ಪಾಲುದಾರರು, ಪ್ರತಿನಿಧಿಗಳು ‘ಧರ್ಮಬೀರು ನಾಡಪ್ರಭು ಕೆಂಪೇಗೌಡ’ ಹೆಸರಿನ ಅಥವಾ ಆ ವಿಷಯ ಹೊಂದಿರುವ ಸಿನಿಮಾ ನಿರ್ಮಾಣ, ಪ್ರಸಾರ, ಜಾಹೀರಾತು ಪ್ರಕಟಿಸದಂತೆ ತಾತ್ಕಾಲಿಕ ತಡೆಯಾಜ್ಞೆ ವಿಧಿಸಿದ್ದಾರೆ.