‘2003ರಲ್ಲಿ ಪ್ರಾರಂಭವಾದ ಸಂಕಲ್ಪ ಇಂಡಿಯಾ ಫೌಂಡೇಷನ್ ಸ್ವಯಂ ಪ್ರೇರಿತ ರಕ್ತದಾನ, ಮಕ್ಕಳಲ್ಲಿ ಕಂಡು ಬರುವ ಥಲಸ್ಸಿಮಿಯಾ ರೋಗವನ್ನು ತಡೆಗಟ್ಟುವಲ್ಲಿ ಮತ್ತು ಅವರಿಗೆ ಚಿಕಿತ್ಸೆ ನೀಡುತ್ತಾ ಬಂದಿದೆ. ಈಗ ನಿತ್ಯ 25ಕ್ಕೂ ಹೆಚ್ಚು ಮಂದಿಗೆ ರಕ್ತವನ್ನು ಪೂರೈಕೆ ಮಾಡುತ್ತಿದ್ದು, ವರ್ಷಕ್ಕೆ 150 ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ದೇಶದಾದ್ಯಂತ 15 ಥಲಸ್ಸಿಮಿಯಾ ಡೇ ಕೇರ್ ಕೇಂದ್ರಗಳಿದ್ದು, ಇದರಲ್ಲಿ 1,764 ಥಲಸ್ಸಿಮಿಯಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಫೌಂಡೇಷನ್ ಅಧ್ಯಕ್ಷ ಲಲಿತ್ ಪಾರ್ಮರ್ ಮಾಹಿತಿ ನೀಡಿದರು.