‘ರೌಡಿ ವಿನಯ್ ವಿರುದ್ಧ ರಾಜಾಜಿನಗರ ಹಾಗೂ ಬಸವೇಶ್ವರನಗರ ಠಾಣೆಯಲ್ಲಿ ಏಳು ಪ್ರಕರಣಗಳು ದಾಖಲಾಗಿದ್ದವು. 10ನೇ ತರಗತಿ ಅನುತ್ತೀರ್ಣಳಾಗಿದ್ದ ಕೀರ್ತನಾ, ಆತನ ಜೊತೆ ಓಡಾಡುತ್ತಿದ್ದಳು. ಇಬ್ಬರೂ ಸೇರಿ ಕೃತ್ಯ ಎಸಗುತ್ತಿದ್ದರೆಂಬ ಮಾಹಿತಿ ಇದ್ದು, ತನಿಖೆ ಮುಂದುವರಿದಿದೆ. ಸದ್ಯ ಅವರಿಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದೂ ಹೇಳಿದರು.