‘ಹೊಸ ವರ್ಷಾಚರಣೆ ಪ್ರಯುಕ್ತ ದೀಪಕ್ ಅವರು ಕುಟುಂಬ ಸಮೇತ ಜ. 1ರಂದು ತಿರುಪತಿಗೆ ಹೊರಟಿದ್ದರು. ಆ ಬಗ್ಗೆ ಭದ್ರತಾ ಸಿಬ್ಬಂದಿಗೆ
ವಿಷಯ ತಿಳಿಸಿದ್ದರು. ‘ಮನೆ ಕಡೆ ಜೋಪಾನ’ ಎಂದು ಸಹ ಸೂಚಿಸಿದ್ದರು. ಅದೇ ದಿನ ರಾತ್ರಿ ಸಹಚರರನ್ನು ಕರೆಸಿಕೊಂಡಿದ್ದ ಆರೋಪಿ ಸಂಜಯ್, ಮನೆ ಬೀಗ ಮುರಿದು 709 ಗ್ರಾಂ ಚಿನ್ನಾಭರಣ ಹಾಗೂ ₹ 3 ಲಕ್ಷ ನಗದು ಕದ್ದು ಪರಾರಿಯಾಗಿದ್ದಾನೆ. ಆರೋಪಿ ಕೃತ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದೂ ಮೂಲಗಳು ತಿಳಿಸಿವೆ.