<p><strong>ಬೆಂಗಳೂರು</strong>: ಸ್ನೇಹಿತನನ್ನೇ ಅಪಹರಿಸಿ ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ಬಾಲಕ ಸೇರಿ ಮೂವರು ಆರೋಪಿಗಳನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.</p><p>ಎಚ್.ಹೊಸಹಳ್ಳಿ ನಿವಾಸಿಗಳಾದ ಖಾಜ (19) ಮತ್ತು ಜಾನ್ ಪೀಟರ್ (20) ಹಾಗೂ ಬಾಲಕನನ್ನು ಬಂಧಿಸಲಾಗಿದೆ.</p><p>‘ಗೂಡ್ಸ್ ವಾಹನ ಚಾಲಕ ಬಸವರಾಜ್ ಅವರನ್ನು ಆರೋಪಿಗಳು ಅಪಹರಿಸಿ, ಹಣ ಸುಲಿಗೆ ಮಾಡಿದ್ದರು. ಕ್ಯಾಬ್ ಖರೀದಿಸುವ ಸಲುವಾಗಿ ಗೂಡ್ಸ್ ವಾಹನ ಮಾರಾಟ ಮಾಡಿದ್ದರು. ಅದರಿಂದ ಬಂದ ಹಣವನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು. ಈ ವಿಷಯ ತಿಳಿದ ಬಸವರಾಜ್ ಸ್ನೇಹಿತ ಖಾಜ ಮತ್ತೊಬ್ಬರೊಂದಿಗೆ ಸೇರಿ ಜನವರಿ 30ರಂದು ಸಂಜೆ 7 ಗಂಟೆ ಸುಮಾರಿಗೆ ಬಸವರಾಜ್ ಅವರಿಗೆ ಕರೆ ಮಾಡಿ ಮನೆಯಿಂದ ಕರೆಸಿಕೊಂಡು ಬಳಿಕ ಆಟೊದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದುರು’ ಎಂದು ಪೊಲೀಸರು ತಿಳಿಸಿದರು.</p><p>ಇದಾದ ನಂತರ ಅವರನ್ನು ಥಳಿಸಿ, ₹1,500 ನಗದು ಕಸಿದುಕೊಂಡಿದ್ದರು. ಅಲ್ಲದೇ ₹50 ಸಾವಿರ ಹಣವನ್ನು ತರಿಸಿಕೊಡುವಂತೆ ಧಮ್ಕಿ ಹಾಕಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ಬಸವರಾಜ್ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.</p>
<p><strong>ಬೆಂಗಳೂರು</strong>: ಸ್ನೇಹಿತನನ್ನೇ ಅಪಹರಿಸಿ ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ಬಾಲಕ ಸೇರಿ ಮೂವರು ಆರೋಪಿಗಳನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.</p><p>ಎಚ್.ಹೊಸಹಳ್ಳಿ ನಿವಾಸಿಗಳಾದ ಖಾಜ (19) ಮತ್ತು ಜಾನ್ ಪೀಟರ್ (20) ಹಾಗೂ ಬಾಲಕನನ್ನು ಬಂಧಿಸಲಾಗಿದೆ.</p><p>‘ಗೂಡ್ಸ್ ವಾಹನ ಚಾಲಕ ಬಸವರಾಜ್ ಅವರನ್ನು ಆರೋಪಿಗಳು ಅಪಹರಿಸಿ, ಹಣ ಸುಲಿಗೆ ಮಾಡಿದ್ದರು. ಕ್ಯಾಬ್ ಖರೀದಿಸುವ ಸಲುವಾಗಿ ಗೂಡ್ಸ್ ವಾಹನ ಮಾರಾಟ ಮಾಡಿದ್ದರು. ಅದರಿಂದ ಬಂದ ಹಣವನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು. ಈ ವಿಷಯ ತಿಳಿದ ಬಸವರಾಜ್ ಸ್ನೇಹಿತ ಖಾಜ ಮತ್ತೊಬ್ಬರೊಂದಿಗೆ ಸೇರಿ ಜನವರಿ 30ರಂದು ಸಂಜೆ 7 ಗಂಟೆ ಸುಮಾರಿಗೆ ಬಸವರಾಜ್ ಅವರಿಗೆ ಕರೆ ಮಾಡಿ ಮನೆಯಿಂದ ಕರೆಸಿಕೊಂಡು ಬಳಿಕ ಆಟೊದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದುರು’ ಎಂದು ಪೊಲೀಸರು ತಿಳಿಸಿದರು.</p><p>ಇದಾದ ನಂತರ ಅವರನ್ನು ಥಳಿಸಿ, ₹1,500 ನಗದು ಕಸಿದುಕೊಂಡಿದ್ದರು. ಅಲ್ಲದೇ ₹50 ಸಾವಿರ ಹಣವನ್ನು ತರಿಸಿಕೊಡುವಂತೆ ಧಮ್ಕಿ ಹಾಕಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ಬಸವರಾಜ್ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.</p>