ಬೆಂಗಳೂರು: ಯಲಹಂಕ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಕಳಿದುರ್ಗ ನಡುವಿನ ದ್ವಿಪಥ ವಿದ್ಯುದೀಕರಣ ರೈಲು ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ.
ರೈಲ್ವೆ ಸುರಕ್ಷತಾ ಆಯುಕ್ತ ಅಭಯಕುಮಾರ್ ರೈ ಅವರು ಗುರುವಾರ ವಿದ್ಯುದೀಕರಣ ಮಾರ್ಗದ ಸುರಕ್ಷತೆ ಪರಿಶೀಲಿಸಿದರು.
ಯಲಹಂಕ ಮತ್ತು ಮಾಕಳಿದುರ್ಗ ನಡುವಿನ 34 ಕಿಲೋ ಮೀಟರ್ನಲ್ಲಿ ಮಾರ್ಗದಲ್ಲಿ ಅವರು ನಡೆಸಿದ ವೇಗದ ಪರೀಕ್ಷೆ ಯಶಸ್ವಿಯಾಗಿದೆ. ಶುಕ್ರವಾರದಿಂದ ಈ ಮಾರ್ಗ ಸಂಚಾರಕ್ಕೆ ಮುಕ್ತಗೊಂಡಿದೆ ಎಂದು ನೈರುತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
2015-16ರಲ್ಲಿ ಉದ್ದೇಶಿತ ಮಾರ್ಗಕ್ಕೆ ಅನುಮೋದನೆ ದೊರಕಿತ್ತು. ನಾಲ್ಕು ವರ್ಷಗಳ ಕಾಮಗಾರಿ ನಡೆದಿದೆ.