‘ಪಾರ್ಶ್ವವಾಯು, ಅಪಸ್ಮಾರ, ಬುದ್ಧಿಮಾಂದ್ಯತೆ, ಮಿದುಳಿನ ಸೋಂಕು ಸೇರಿ ವಿವಿಧ ನರ ಸಂಬಂಧಿ ಕಾಯಿಲೆಗಳು ಅಂಗವಿಕಲತೆಗೆ ಕಾರಣವಾಗುತ್ತಿವೆ. ಸಾಮಾನ್ಯ ನರ ರೋಗಗಳಿಗೆ ಸಂಬಂಧಿಸಿದಂತೆ 2022ರ ಮಾರ್ಚ್ನಿಂದ ಜೂನ್ ತಿಂಗಳವರೆಗೆ ಪ್ರಾಯೋಗಿಕವಾಗಿ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ದಕ್ಷಿಣದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನೂರು ವೈದ್ಯರಿಗೆ ತರಬೇತಿ ನೀಡಲಾಗಿದೆ. ಈ ತರಬೇತಿಯನ್ನು ಮುಂದುವರೆಸಲಾಗುವುದು’ ಎಂದು ಸಂಸ್ಥೆಯ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ
ತಿಳಿಸಿದ್ದಾರೆ.