‘ನಗರದ ಹೊರವಲಯದಲ್ಲಿ 10 ಎಕರೆ ಜಾಗದಲ್ಲಿ ‘ಗೋಶಾಲೆ’ ಮಾದರಿಯಲ್ಲಿ ‘ನಾಯಿಶಾಲೆ’ ಮಾಡಿ ಎಂದು ಶಾಸಕರೇನೋ ಸಲಹೆ ನೀಡಿದ್ದಾರೆ. ಆ ರೀತಿ ಮಾಡಿದರೆ ಸುತ್ತಮುತ್ತಲಿನ ಹಳ್ಳಿಗಳಿಗೆ ನಾಯಿಗಳ ಕಾಟ ಹೆಚ್ಚಾಗಿ, ಅಲ್ಲಿನ ಜನರು ಬಂದು ವಿಧಾನಸಭೆಗೆ ಮುತ್ತಿಗೆ ಹಾಕಿದರೆ ನಾವೇನು ಮಾಡುವುದು ಹೇಳಿ. ಬೆಂಗಳೂರಿನ ಕಸವನ್ನು ಹೊರವಲಯದಲ್ಲಿ ಹಾಕಿ ಆಗುತ್ತಿರುವ ಅವಾಂತರವೇ ಸಾಕು’ ಎಂದು ಮಾಧುಸ್ವಾಮಿ ಹೇಳಿದರು.