‘ಇಲಾಖೆ ಟ್ರಾನ್ಸ್ಫಾರ್ಮರ್ಗಳದುರಸ್ತಿಗೆ ಇಲಾಖೆ ಪ್ರತಿವರ್ಷ ₹ 150 ಕೋಟಿ ವೆಚ್ಚ ಮಾಡುತ್ತದೆ. ನಿರ್ವಹಣಾ ಕೆಲಸವನ್ನು ಕಾಲ ಕಾಲಕ್ಕೆ ನಡೆಸಿದರೆ ದುರಸ್ತಿ ವೆಚ್ಚ ತಗ್ಗಿಸಲು ಸಾಧ್ಯ. 24 ಗಂಟೆಯಲ್ಲಿ ಟ್ರಾನ್ಸ್ಫಾರ್ಮರ್ ಬದಲಾವಣೆ ಯೋಜನೆಯ ಮುಂದು
ವರಿದ ಭಾಗವಿದು. ನಿರ್ವಹಣಾ ಸಮಸ್ಯೆ ಏಕೆ ಉಂಟಾಗುತ್ತಿದೆ ಎಂಬುದನ್ನು ಅರ್ಥೈಸಿಕೊಂಡರೆ ಪರಿಹಾರ ಕಲ್ಪಿಸುವುದು ಸುಲಭ. ಅಲ್ಲದೆ, ಎಲ್ಲಿ ಹೊಸ ಟ್ರಾನ್ಸ್ಫಾರ್ಮರ್ಗಳ ತುರ್ತು ಅಗತ್ಯವಿದೆ ಎಂಬುದನ್ನೂ ತಿಳಿದುಕೊಳ್ಳಬಹುದು’ ಎಂದಿದ್ದಾರೆ. ‘ಕಳೆದೊಂದು ತಿಂಗಳ ಅವಧಿಯಲ್ಲಿ ನಡೆದ ಟ್ರಾನ್ಸ್ಫಾರ್ಮರ್ ದುರಂತಗಳ ಕಾರಣಕ್ಕೆ ಈ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ’ ಎಂದೂ ಸುನಿಲ್ ಕುಮಾರ್ ತಿಳಿಸಿದ್ದಾರೆ.