<p><strong>ಬೆಂಗಳೂರು:</strong> ‘ವಚನಗಳು ಅಂತರಂಗದ ಬೆಳಕಾಗಿದ್ದು, ಬದುಕನ್ನು ನಡೆಸಲು ಮಾರ್ಗದರ್ಶಿಯವಾಗಿವೆ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಹೇಳಿದರು.</p>.<p>ಪ್ರಪುಣ್ಯ - ವಚನಜ್ಯೋತಿ ಬಳಗ ಆಯೋಜಿಸಿದ್ದ ‘ವಚನ ಗಾನಯಾನ -5’ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಅತ್ಯಂತ ಸರಳವಾಗಿ ಮನಕ್ಕೆ ಮುಟ್ಟುವಂತೆ ಬಸವಣ್ಣನವರು ಮತ್ತು ಇತರ ವಚನಕಾರರು ನಮಗೆ ನೀಡಿರುವ ವಚನಗಳು ಕನ್ನಡದ ಅಮೂಲ್ಯ ಸಂಪತ್ತು. ವಚನ ಗಾನಯಾನದ ಮೂಲಕ ವಿದ್ಯಾರ್ಥಿಗಳಿಗೆ ವಚನಗಳನ್ನು ಕಲಿಸಿ ಹಾಡಿಸುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು.</p>.<p>‘ಬಸವಣ್ಣ ಮಹಾದೇವಿಯಕ್ಕನಿಗೆ ಸೀಮಿತವಾಗದೆ ಉರಿಲಿಂಗಪೆದ್ದಿ, ಉಳಿಯುಮೇಶ್ಚರ ಚಿಕ್ಕಣ್ಣ ಮೊದಲಾದವರ ವಚನಗಳನ್ನು ಕಲಿಸಿರುವ ಈರಯ್ಯ ಚಿಕ್ಕಮಠರು ಪ್ರಶಂಸಾರ್ಹರು’ ಎಂದು ಬಣ್ಣಿಸಿದರು.</p>.<p>ಪ್ರಪುಣ್ಯ ಸಂಗೀತ ಶಾಲೆಯ ಈರಯ್ಯ ಚಿಕ್ಕಮಠರು ಮಾತನಾಡಿ, ‘ಕೋವಿಡ್ ಸಮಯದಲ್ಲಿ ಆರಂಭವಾದ ವಚನ ಗೀತಯಾನ ಇದೀಗ ಐದನೇ ವರ್ಷಕ್ಕೆ ಕಾಲಿಟ್ಟಿದೆ’ ಎಂದರು.</p>.<p>ವಚನಜ್ಯೋತಿ ಬಳಗದ ಗೌರವಾಧ್ಯಕ್ಷ ಮಹೇಶ ಬೆಲ್ಲದ್, ಬಳಗದ ಶಶಿ ವಿಶ್ವನಾಥ್, ಕಾಂಗ್ರೆಸ್ ಮುಖಂಡ ಎಂ. ನಂಜಪ್ಪ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ವಿತರಿಸಿದರು.</p>.<p>ಬಾಲಪ್ರತಿಭೆಗಳಾದ ಪೂರ್ಣಿಕ, ಪ್ರಪುಣ್ಯ, ವೇದಾಂತ್, ಸನ್ನಿಧಿ, ಗಾನಶ್ರೀ ಸೇರಿದಂತೆ ಹಿರಿಯ ವಿದ್ಯಾರ್ಥಿಗಳಾದ ಕೆಂಪರಾಜು, ಉಮೇಶ್, ಅಕ್ಷತಾ, ವಿಜಯಲಕ್ಷ್ಮಿ, ಭಾಗ್ಯ ಅವರು ವಚನ ಸುಧೆ ಹರಿಸಿದರು.</p>.<p>ಗಾಯಕಿ ಟಿ.ಎಂ. ಜಾನಕಿ, ಉಮೇಶ್ ಆರಾಧ್ಯ, ನಿಶಾ, ಚಂದ್ರಶೇಖರ್, ಕೇಶವಮೂರ್ತಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ವಚನಗಳು ಅಂತರಂಗದ ಬೆಳಕಾಗಿದ್ದು, ಬದುಕನ್ನು ನಡೆಸಲು ಮಾರ್ಗದರ್ಶಿಯವಾಗಿವೆ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಹೇಳಿದರು.</p>.<p>ಪ್ರಪುಣ್ಯ - ವಚನಜ್ಯೋತಿ ಬಳಗ ಆಯೋಜಿಸಿದ್ದ ‘ವಚನ ಗಾನಯಾನ -5’ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಅತ್ಯಂತ ಸರಳವಾಗಿ ಮನಕ್ಕೆ ಮುಟ್ಟುವಂತೆ ಬಸವಣ್ಣನವರು ಮತ್ತು ಇತರ ವಚನಕಾರರು ನಮಗೆ ನೀಡಿರುವ ವಚನಗಳು ಕನ್ನಡದ ಅಮೂಲ್ಯ ಸಂಪತ್ತು. ವಚನ ಗಾನಯಾನದ ಮೂಲಕ ವಿದ್ಯಾರ್ಥಿಗಳಿಗೆ ವಚನಗಳನ್ನು ಕಲಿಸಿ ಹಾಡಿಸುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು.</p>.<p>‘ಬಸವಣ್ಣ ಮಹಾದೇವಿಯಕ್ಕನಿಗೆ ಸೀಮಿತವಾಗದೆ ಉರಿಲಿಂಗಪೆದ್ದಿ, ಉಳಿಯುಮೇಶ್ಚರ ಚಿಕ್ಕಣ್ಣ ಮೊದಲಾದವರ ವಚನಗಳನ್ನು ಕಲಿಸಿರುವ ಈರಯ್ಯ ಚಿಕ್ಕಮಠರು ಪ್ರಶಂಸಾರ್ಹರು’ ಎಂದು ಬಣ್ಣಿಸಿದರು.</p>.<p>ಪ್ರಪುಣ್ಯ ಸಂಗೀತ ಶಾಲೆಯ ಈರಯ್ಯ ಚಿಕ್ಕಮಠರು ಮಾತನಾಡಿ, ‘ಕೋವಿಡ್ ಸಮಯದಲ್ಲಿ ಆರಂಭವಾದ ವಚನ ಗೀತಯಾನ ಇದೀಗ ಐದನೇ ವರ್ಷಕ್ಕೆ ಕಾಲಿಟ್ಟಿದೆ’ ಎಂದರು.</p>.<p>ವಚನಜ್ಯೋತಿ ಬಳಗದ ಗೌರವಾಧ್ಯಕ್ಷ ಮಹೇಶ ಬೆಲ್ಲದ್, ಬಳಗದ ಶಶಿ ವಿಶ್ವನಾಥ್, ಕಾಂಗ್ರೆಸ್ ಮುಖಂಡ ಎಂ. ನಂಜಪ್ಪ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ವಿತರಿಸಿದರು.</p>.<p>ಬಾಲಪ್ರತಿಭೆಗಳಾದ ಪೂರ್ಣಿಕ, ಪ್ರಪುಣ್ಯ, ವೇದಾಂತ್, ಸನ್ನಿಧಿ, ಗಾನಶ್ರೀ ಸೇರಿದಂತೆ ಹಿರಿಯ ವಿದ್ಯಾರ್ಥಿಗಳಾದ ಕೆಂಪರಾಜು, ಉಮೇಶ್, ಅಕ್ಷತಾ, ವಿಜಯಲಕ್ಷ್ಮಿ, ಭಾಗ್ಯ ಅವರು ವಚನ ಸುಧೆ ಹರಿಸಿದರು.</p>.<p>ಗಾಯಕಿ ಟಿ.ಎಂ. ಜಾನಕಿ, ಉಮೇಶ್ ಆರಾಧ್ಯ, ನಿಶಾ, ಚಂದ್ರಶೇಖರ್, ಕೇಶವಮೂರ್ತಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>