<p><strong>ಬೆಂಗಳೂರು</strong>: ‘ವಚನಗಳು ಕಥೆ ಪುರಾಣಗಳಲ್ಲ; ವೈಚಾರಿಕತೆಯ ಪ್ರತಿಬಿಂಬ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ತಿಳಿಸಿದರು.</p>.<p>ಸಂಪಂಗಿರಾಮನಗರದಲ್ಲಿ ವೀರಶೈವ ಸದ್ಧರ್ಮ ವರ್ಧಿನಿ ಸಂಘ ಆಯೋಜಿಸಿದ್ದ ವಚನ ಶ್ರಾವಣದಲ್ಲಿ ಅವರು ಉಪನ್ಯಾಸ ನೀಡಿದರು.</p>.<p>ವಿಚಾರಶೀಲತೆಯೇ ವಚನಗಳ ಮೂಲ ಲಕ್ಷಣವಾಗಿದೆ. ವೈಚಾರಿಕ ನೆಲೆಗಟ್ಟಿನಲ್ಲಿ ಸಮ ಸಮಾಜವನ್ನು ನಿರ್ಮಾಣ ಮಾಡಿದ ಬಸವಣ್ಣನವರು ಸ್ತ್ರೀ ಸಮಾನತೆಯನ್ನು ಆಚರಣೆಗೆ ತಂದರು. ಶೋಷಿತರನ್ನು ಅಪ್ಪಿಕೊಂಡು, ಒಪ್ಪಿಕೊಂಡು ಜೊತೆಗೆ ಕರೆದುಕೊಂಡು ನಡೆದ ಮಹಾತ್ಮರು ಎಂದು ಬಣ್ಣಿಸಿದರು.</p>.<p>ವಚನ ಗಾಯನ ಸ್ಪರ್ಧೆಯಲ್ಲಿ ಅತಿ ಹೆಚ್ಚು ವಚನಗಳನ್ನು ಹಾಡುವ ಸ್ಪರ್ಧೆಯಲ್ಲಿ ಸರ್ವಾಣಿ ಪ್ರಥಮ, ಶ್ರುತಿ ದ್ವಿತೀಯ, ಜೀವಿತಾ ತೃತೀಯ ಬಹುಮಾನ ಪಡೆದರು. ಐವತ್ತಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. </p>.<p>ಸರ್ಪಭೂಷಣ ಮಠದ ಮಲ್ಲಿಕಾರ್ಜುನ ದೇವರು, ಸಂಘದ ಅಧ್ಯಕ್ಷ ಶಿವಪ್ಪ, ಪದಾಧಿಕಾರಿಗಳಾದ ಗೌರಿಶಂಕರ್, ಪಂಚಾಕ್ಷರಿ, ಗುರುಪ್ರಸಾದ್, ರುದ್ರಪ್ಪ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ವಚನಗಳು ಕಥೆ ಪುರಾಣಗಳಲ್ಲ; ವೈಚಾರಿಕತೆಯ ಪ್ರತಿಬಿಂಬ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ತಿಳಿಸಿದರು.</p>.<p>ಸಂಪಂಗಿರಾಮನಗರದಲ್ಲಿ ವೀರಶೈವ ಸದ್ಧರ್ಮ ವರ್ಧಿನಿ ಸಂಘ ಆಯೋಜಿಸಿದ್ದ ವಚನ ಶ್ರಾವಣದಲ್ಲಿ ಅವರು ಉಪನ್ಯಾಸ ನೀಡಿದರು.</p>.<p>ವಿಚಾರಶೀಲತೆಯೇ ವಚನಗಳ ಮೂಲ ಲಕ್ಷಣವಾಗಿದೆ. ವೈಚಾರಿಕ ನೆಲೆಗಟ್ಟಿನಲ್ಲಿ ಸಮ ಸಮಾಜವನ್ನು ನಿರ್ಮಾಣ ಮಾಡಿದ ಬಸವಣ್ಣನವರು ಸ್ತ್ರೀ ಸಮಾನತೆಯನ್ನು ಆಚರಣೆಗೆ ತಂದರು. ಶೋಷಿತರನ್ನು ಅಪ್ಪಿಕೊಂಡು, ಒಪ್ಪಿಕೊಂಡು ಜೊತೆಗೆ ಕರೆದುಕೊಂಡು ನಡೆದ ಮಹಾತ್ಮರು ಎಂದು ಬಣ್ಣಿಸಿದರು.</p>.<p>ವಚನ ಗಾಯನ ಸ್ಪರ್ಧೆಯಲ್ಲಿ ಅತಿ ಹೆಚ್ಚು ವಚನಗಳನ್ನು ಹಾಡುವ ಸ್ಪರ್ಧೆಯಲ್ಲಿ ಸರ್ವಾಣಿ ಪ್ರಥಮ, ಶ್ರುತಿ ದ್ವಿತೀಯ, ಜೀವಿತಾ ತೃತೀಯ ಬಹುಮಾನ ಪಡೆದರು. ಐವತ್ತಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. </p>.<p>ಸರ್ಪಭೂಷಣ ಮಠದ ಮಲ್ಲಿಕಾರ್ಜುನ ದೇವರು, ಸಂಘದ ಅಧ್ಯಕ್ಷ ಶಿವಪ್ಪ, ಪದಾಧಿಕಾರಿಗಳಾದ ಗೌರಿಶಂಕರ್, ಪಂಚಾಕ್ಷರಿ, ಗುರುಪ್ರಸಾದ್, ರುದ್ರಪ್ಪ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>