ವಿಚಾರಣೆ ವೇಳೆ ಬೆಂಗಳೂರು ಜಲಮಂಡಳಿ ಪರ ವಾದ ಮಂಡಿಸಿದ ವಕೀಲ ಕೆ.ಬಿ.ಮೋನೇಶ್ ಕುಮಾರ್ ಅವರು, ‘ವರ್ತೂರು ಕೆರೆ ಸೇರುತ್ತಿದ್ದ ಒಳಚರಂಡಿಯ ಕೊಳಚೆ ನೀರನ್ನು ಶುದ್ಧೀಕರಿಸಿ ಆ ನೀರನ್ನು ಕೋಲಾರದ ಕೆರೆಗಳಿಗೆ ಹರಿಸಲಾಗುವುದು. ಈ ನಿಟ್ಟಿನಲ್ಲಿ ಇದು ಬೆಂಗಳೂರಿನ ಅತಿದೊಡ್ಡ ಎಸ್ಟಿಪಿ ಎನಿಸಲಿದೆ. ಆದರೆ, ವಾಜ್ಯದಿಂದಾಗಿ ಘಟಕ ನಿರ್ಮಾಣ ವಿಳಂಬವಾಗುತ್ತಿದೆ’ ಎಂದು ಆಕ್ಷೇಪಿಸಿದರು.