‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಲಮೂಲದ ಅಭಿವೃದ್ಧಿಗೆ ಚಾಲನೆ ಸಿಕ್ಕಿತು. ಆದರೆ, ಸ್ಥಳೀಯ ಕೆಲ ಪ್ರಭಾವಿಗಳು ಕೋರ್ಟ್ ಮೆಟ್ಟಿಲೇರಿದ್ದರಿಂದ ಕಾಮಗಾರಿಗೆ ಹಿನ್ನಡೆಯಾಗಿತ್ತು. ಒತ್ತುವರಿಯಿಂದ ಜಲಕಾಯದ ಜಾಗ 7 ಎಕರೆಯಿಂದ 4 ಎಕರೆಗೆ ಇಳಿದಿದೆ. ಎಲ್ಲ ಅಂದುಕೊಂಡಂತೆ ನಡೆದಿದ್ದರೆ, ಜಲಮೂಲದ ಚಿತ್ರಣ ಈಗಾಗಲೇ ಬದಲಾಗಬೇಕಿತ್ತು’ ಎಂದು ಪಾಲಿಕೆ ಸದಸ್ಯೆ ಶೋಭಾ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.