ಬೆಂಗಳೂರು: ವರ್ಬ್ಯಾಟಲ್ ಫೌಂಡೇಷನ್ ಆಯೋಜಿಸಿರುವ 14ನೇ ರಾಜ್ಯ ಮಟ್ಟದ ಅಂತರ ಶಾಲಾ ಮತ್ತು ಕಾಲೇಜು ಮಟ್ಟದ ಚರ್ಚಾ ಸ್ಪರ್ಧೆಯ ಫೈನಲ್ ಸುತ್ತು ಕೆ.ಆರ್.ಪುರದ ಗಾರ್ಡನ್ ಸಿಟಿ ಕಾಲೇಜಿನಲ್ಲಿ ಶುಕ್ರವಾರ ನಡೆದಿದೆ.
ಹುಬ್ಬಳ್ಳಿ, ಧಾರವಾಡ, ರಾಯಪುರ, ಬೆಳಗಾವಿ, ಗದಗ, ಮಂಗಳೂರು, ಉಡುಪಿ, ಮಣಿಪಾಲ್, ಮೂಡಬಿದ್ರೆ, ಶಿರಸಿ, ತಿಪಟೂರು, ಮೈಸೂರು ಮತ್ತು ಬೆಂಗಳೂರಿನ 650ಕ್ಕೂ ಹೆಚ್ಚು ಮಕ್ಕಳು ಈ ಬಾರಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ 24 ವಿದ್ಯಾರ್ಥಿಗಳ 12 ತಂಡಗಳು ಅಂತಿಮ ಸುತ್ತಿನಲ್ಲಿದ್ದವು.
ವಿಜೇತ ತಂಡಕ್ಕೆ ₹ 30 ಸಾವಿರ, ಅಂತಿಮ ಸುತ್ತಿಗೆ ಆಯ್ಕೆಯಾದವರಿಗೆ ₹5 ಸಾವಿರ ನಗದು ಬಹುಮಾನ ನೀಡಲಾಯಿತು.