ದಯಾನಂದ ಸಾಗರ ಕಾಲೇಜಿನಲ್ಲಿ ‘ವೈಬ್ರೇಷನ್ಸ್’

ಬೆಂಗಳೂರು: ದಯಾನಂದ ಸಾಗರ ಕಾಲೇಜಿನ ‘ವೈಬ್ರೇಷನ್ಸ್’ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ನಟ ಮಾಸ್ಟರ್ ಆನಂದ್, ಚೈತ್ರ ವಾಸುದೇವನ್ ಹಾಗೂ ವಿಕ್ಕಿ ವರುಣ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ಪ್ರದರ್ಶನ ಕಲೆಗಳ ಕೇಂದ್ರದ ‘ಮುದ್ರಾ’ ನೃತ್ಯ ತಂಡದಿಂದ ಆಕರ್ಷಕವಾದ ನೃತ್ಯ ಪ್ರದರ್ಶನ ಗಮನಸೆಳೆಯಿತು.
‘ಬಾಹ್ಯಾಕಾಶ’ ಎನ್ನುವ ವಿಷಯದೊಂದಿಗೆ ಈ ವರ್ಷದ ವೈಬ್ರೇಷನ್ಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ರಂಜಿಸಿದವು. ತಾಳಕ್ಕೆ ತಕ್ಕಂತೆ ಕುಣಿದ ಗಗನಯಾತ್ರಿಯ ಕಾರ್ಯಕ್ರಮ ಉತ್ಸವಕ್ಕೆ ಮೆರುಗು ನೀಡಿತು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಉತ್ಸವಕ್ಕೆ ಕಳೆ ತಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.