‘ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು, ಉದ್ಯಾನ, ಆಟದ ಮೈದಾನ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದ ಬಿಬಿಎಂಪಿಯ ಹಿಂದಿನ ಅಧಿಕಾರಿಗಳು, ಕ್ವಾರಿ ನಿರ್ಮಾಣ ಮಾಡಿ ಕಸ ಸುರಿಯಲು ಆರಂಭಿಸಿದ್ದರು. ಕಸದಿಂದ ಕ್ವಾರಿ ತುಂಬುತ್ತಿದ್ದು, ಭರವಸೆ ಮಾತ್ರ ಈಡೇರಿಲ್ಲ. ಸ್ಥಳೀಯರ ಆರೋಗ್ಯಕ್ಕೆ ಮಾರಕವಾಗುವ ರೀತಿಯಲ್ಲಿ ಅವೈಜ್ಞಾನಿಕವಾಗಿ ಕಸ ಸುರಿಯಲಾಗುತ್ತಿದೆ’ ಎಂದು ಗ್ರಾಮಸ್ಥರು ದೂರಿದರು.